ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ :ಇಲ್ಲಿ ಮುಖ್ಯ ಕಡಲ ತೀರದ ಮಿಡ್ಲ ಬೀಚ್ ಬಳಿ ಸಮುದ್ರದಲ್ಲಿ ಈಜಲು ಹೋಗಿ ಕೊಚ್ಚಿಹೋಗುತ್ತಿದ್ದ ಕೇರಳ ಮೂಲದ ನಾಲ್ವರು ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ (Rescue)ಮಾಡಿದ್ದಾರೆ.
ಅದೈತ್, ಮುರುಳಿ, ತೇಜಸ್ವಿ, ಪ್ರೀಯಾಮ್ವಾದ ಈ ನಾಲ್ವರು ಸೇರಿ ಸಮುದ್ರದಲ್ಲಿ ಈಜಲು ಹೋಗಿದ್ದರು. ಈ ವೇಳೆ ಕಡಲ ರಕ್ಕಸ ಅಲೆಗೆ ಸಿಲುಕಿ ನಾಲ್ವರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದ ಇದನ್ನ ಗಮನಿಸಿದ ಕರ್ತವ್ಯದಲ್ಲಿದ್ದ ಲೈಪ್ ಗಾರ್ಡ್ ಸಿಬ್ಬಂದಿಗಳು ತಕ್ಷಣ ನಾಲ್ವರು ಪ್ರವಾಸಿಗರನ್ನ ರಕ್ಷಣೆ ಮಾಡಿದ್ದಾರೆ.
ಲೈಪಗಾರ್ಡ ಸಿಬ್ಬಂದಿ ಮಹಾಂತೇಶ ಹರಿಕಂತ್ರ, ಸ್ಥಳೀಯರಾದ ರಾಘವೇಂದ್ರ ಗೌಡ ಮತ್ತು ಸಂತೋಷ ಗೌಡ ಎನ್ನುವರು ಕೂಡಲೇ ಸಹಾಯಕ್ಕೆ ತೆರಳಿ ಪ್ರವಾಸಿಗರ ಜೀವ ರಕ್ಷಿಸಿದ್ದಾರೆ…..
ಗಮನಿಸಿ