ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ
:ಇಲ್ಲಿನ ಕಡಲತೀರದಲ್ಲಿ ನಾಲ್ವರು ಪ್ರವಾಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಬಳಿಕ ಜಿಲ್ಲಾಡಳಿತ ಪ್ರವಾಸಿಗರಿಗೆ ಕಡಲ ತೀರಕ್ಕೆ ಹೋಗದಂತೆ ನಿಷೇಧ ಹಾಕಿದ್ದು,ಇದೀಗ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಕಡಲ ತೀರಗಳ‌ ಬಗ್ಗೆ ಸ್ಪಷ್ಟತೆ ಸಿಗದೆ ಪ್ರವಾಸಿಗರು ನಿರಾಶೆ ಪಡುವಂತಾಗಿದೆ.

ಡಿಸೆಂಬರ್ 10ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ಮುರಾರ್ಜಿ ಶಾಲೆಯ ವಿದ್ಯಾರ್ಥಿಗಳು ಮುರುಡೇಶ್ವರ ಕಡಲತೀರದಲ್ಲಿ ಸಾವನ್ನಪ್ಪಿದ ನಂತರದಲ್ಲಿ ಸಂಪೂರ್ಣವಾಗಿ ಕಡಲತೀರವನ್ನ ಮುಚ್ಚಲಾಗಿತ್ತು. ಇದರಿಂದಾಗಿ ಇಲ್ಲಗೆ ಬರುವ ಪ್ರವಾಸಿಗರು‌ ಕಡಲಿಗೆ ಇಳಿಯಲಾಗದೆ ವಾಪಸ್ ಆಗುವಂತಾಗಿತ್ತು.ಕಡಲತೀರದಲ್ಲಿ ಅಂಗಡಿಗಳು ಮುಚ್ಚಿದ್ದು,ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯ ಮುರುಡೇಶ್ವರ ಕಡಲತೀರ ಹೊರತು ಪಡಿಸಿ ಇನ್ನೂಳಿದ ಎಲ್ಲಾ ಕಡೆಯಲ್ಲಿನ ಕಡಲತೀರಗಳು ಪ್ರವಾಸಿಗರಿಗಾಗಿ ತೆರೆದುಕೊಂಡಿದೆ. ಆದರೆ ಮುರುಡೇಶ್ವರ ಕಡಲ ತೀರಕ್ಕೆ ಮಾತ್ರ ನಿಷೇಧ ಹಾಕಲಾಗಿದೆ.ಕ್ರಿಮ್ಸ್ ಹಾಗೂ ಹೊಸವರ್ಷ ಆಚರಣೆ ಹಿನ್ನಲೆಯಲ್ಲಿ ಲಕ್ಷಾಂತರ ಪ್ರವಾಸಿಗರು ಮುರುಡೇಶ್ವರಕ್ಕೆ ಆಗಮಿಸುತ್ತಿದ್ದಾರೆ.ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಡಲತೀರಕ್ಕೆ ನಿಷೇಧ ಇರುವ ಹಿನ್ನಲೆಯಲ್ಲಿ ಇಲ್ಲಿಯೇ ವಾಸ್ಯವ್ಯ ಮಾಡಬೇಕಿದ್ದ ಪ್ರವಾಸಿಗರು ಬೇರೆ ಕಡಲತೀರಗಳತ್ತ ಮುಖಮಾಡುಂತಾಗಿದೆ.

ಇನ್ನೂ ಇವತ್ತು ಡಿಸೆಂಬರ್ 25ರಿಂದ ಕಡಲತೀರಕ್ಕೆ ಪ್ರವಾಸಿಗರಿಗೆ ಹೋಗಲು ಅವಕಾಶ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಕಲ ಸಿದ್ದತೆ ಮಾಡಿಕೊಂಡಿತ್ತು. ಆದರೆ ಮದ್ಯದಲ್ಲೆ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರೆಯಿಂದಾಗಿ ಮುಂದಿನ ಆದೇಶದವರೆಗೂ ಬಂದ್ ಮಾಡಲಾಗಿದೆ.

ಗಮನಿಸಿ