ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಪಾದಾಚಾರಿಯೋರ್ವನಿಗೆ ಕಾರು ಬಡಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹಾರವಾಡಾ ರೈಲ್ವೆ ಬ್ರಿಜ್ ಬಳಿ ನಡೆದಿದೆ. ಅಮದಳ್ಳಿ ನಿವಾಸಿ ಸೋಮು ಗೌಡ ಮೃತಪಟ್ಟ ವ್ಯಕ್ತಿ.

ಮುರ್ಡೇಶ್ವರದಿಂದ ಕಾರವಾರಕ್ಕೆ ಹೋಗುತ್ತಿದ್ದ ಕಾರು ಹಾರವಾಡಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗೆ ಬಡಿದು ಪಕ್ಕದ ಕೃಷಿ ಜಮೀನಿನಲ್ಲಿ ತಲೆ ಕೆಳಗಾಗಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ಮೂಲದ ಪ್ರಯಾಣಿಕರಾದ ದೀಪಕ ದೇಸಾಯಿ, ಪ್ರೀಯಾ ದೇಸಾಯಿ ಕಾರು ಚಾಲಕ ವಿಶಾಲ ದಾಮೋಧರ ಬಾನಾವಾಳಿಕರ ಎಂಬುವವರಿಗೆ ಗಾಯಗಳಾಗಿದೆ.

ಗಾಯಾಳುಗಳನ್ನು ಐಆರ್‌ಬಿ ಅಂಬ್ಯುಲೆನ್ಸ್‌ನಲ್ಲಿ ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಗಿದೆ. ಸ್ಥಳದಲ್ಲಿ ಐಆ‌ಬಿಯ ನಾಗರಾಜ ಐಗಳ, ಶಿವಾ ನಾಯ್ಕ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಗಮನಿಸಿ