ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:
ಸರ್ಕಾರಿ ಆಯುಷ್ ಆಸ್ಪತ್ರೆಯ ಔಷಧ ವಿತರಣಾ ಕೇಂದ್ರದಲ್ಲಿದ್ದ ಔಷಧಿ ಡಬ್ಬಿಗಳು ಕಣ್ಮರೆಯಾಗಿದ್ದು, ಇಲ್ಲಿನ ಗುತ್ತಿಗೆ ವೈದ್ಯನೊಬ್ಬ ಮಾತ್ರೆಯನ್ನ ಅನಧಿಕೃತವಾಗಿ ಕೊಂಡೊಯ್ದಿರುವ ದೃಶ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಅಲ್ಲದೇ ಮಾತ್ರೆಯನ್ನ ಕದ್ದು ಆಸ್ಪತ್ರೆಯ ಹೊರಭಾಗದಲ್ಲಿ ಈತನೆ ಬೆಂಕಿ ಹಚ್ಚಿ ಇದಕ್ಕೆಲ್ಲಾ ಮಹಿಳಾ‌ ಅಧಿಕಾರಿಯೇ ಕಾರಣ‌ ಎನ್ನುವ ಸುದ್ದಿ ಹಬ್ಬಿಸಿದ್ದ ಎನ್ನಲಾಗಿದೆ,ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿದ‌ ಬಳಿಕ ಈ ಗುತ್ತಿಗೆ ವೈದ್ಯನೇ ಮಾತ್ರೆಗೆ ಬೆಂಕಿ ಹಚ್ಚಿ ಅಲ್ಲಿನ ವೈದ್ಯಾಧಿಕಾರಿಗೆ ಹೆಸರು ಕೆಡಿಸುವ ಷಡ್ಯಂತ್ರ ರೂಪಿಸಿದ್ದ ಎನ್ನುವುದು ತನಿಖೆಯ ಮೇಲ್ನೋಟದಿಂದ ಗೊತ್ತಾಗಿದೆ ಎನ್ನಲಾಗಿದೆ..

ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿನ ಔಷಧ ವಿತರಣಾ ಕೇಂದ್ರದಲ್ಲಿದ್ದ ದಾಸ್ತಾನು ಹಾಗೂ ರಿಜಿಸ್ಟರ್ ಪುಸ್ತಕದಲ್ಲಿದ್ದ ಔಷಧಿ ನಡುವೆ ವ್ಯತ್ಯಾಸ ಕಂಡು ಬಂದಿತ್ತು.ಈ ಬಗ್ಗೆ ಪರಿಶೀಲಿಸಿದಾಗ ಡಿಸೆಂಬರ್ 10ರಂದು ಆಸ್ಪತ್ರೆಯ ವೈದ್ಯ ಡಾ ಸಂಗಮೇಶ ಪರಂಡಿ ಎಂಬಾತ ಅನಧಿಕೃತವಾಗಿ ಔಷಧಿಗಳನ್ನು ಒಯ್ದಿರುವುದು ಪತ್ತೆಯಾಗಿತ್ತು. 25ರಷ್ಟು ಚೂರ್ಣದ ಡಬ್ಬಿಯನ್ನು ಅವರು ಒಯ್ದಿದ್ದರು.ಗುತ್ತಿಗೆ ವೈದ್ಯ ಆಸ್ಪತ್ರೆಯಲ್ಲಿನರುವ ರಾಶಿ ರಾಶಿ ಮಾತ್ರೆಯನ್ನ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋಗುತ್ತಿರುವುದು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅವರು ಅದನ್ನು ಯಾವ ಉದ್ದೇಶಕ್ಕೆ ಒಯ್ದರು? ಯಾರಿಗೆ ವಿತರಿಸಿದರು? ಎಂದು ಮೇಲಧಿಕಾರಿಗಳು ಪ್ರಶ್ನಿಸಿದರೂ ಉತ್ತರಿಸಿರಲಿಲ್ಲ.ಆಸ್ಪತ್ರೆಯಿಂದ ಔಷಧಿ ಕದ್ದಯ ನಂತರದ ಒಂದೇರಡು ದಿನದಲ್ಲಿ ಆಸ್ಪತ್ರೆಯ ಕೌಂಪೌಂಡನಲ್ಲೆ ಮಾತ್ರೆಗಳನ್ನ ಸುಟ್ಟು ಹಾಕುತ್ತಿದ್ದ ಎನ್ನಲಾಗಿದೆ. ಬಡರೋಗಿಗಳಿಗೆ ಬಂದ ಮಾತ್ರೆಯನ್ನ
ಇಲ್ಲಿನ ಮಹಿಳಾ ಅಧಿಕಾರಿ ರೋಗಿಗಳಿಗೆ ವಿತರಣೆ ಮಾಡದೆ ಬೆಂಕಿ ಹಚ್ಚಿ ನಾಶ ಮಾಡುತ್ತಿದ್ದಾರೆಂದು ಈತನೆ ಮಹಿಳಾ ಅಧಿಕಾರಿ ವಿರುದ್ಧ ಸಾರ್ವಜನಿಕರ ಹೆಸರಿನಲ್ಲಿ‌ ಮೇಲಾಧಿಕಾರಿಗಳಿಗೆ ದೂರು ಬರೆಯುತ್ತಿದ್ದ ಎನ್ನುವುದು ಘಟನೆಯ ಬಳಿಕ ಬಹಿರಂಗವಾಗುತ್ತಿದ್ದೆ.

ಆಸ್ಪತ್ರೆಯ ಔಷಧ ನಾಪತ್ತೆಯಾಗಿರುವುದರಿಂದ ಔಷಧ ಸಂಗ್ರಹಣೆಯಲ್ಲಿ ತೊಂದರೆಯಾಗುವುದು, ರೋಗಿಗಳ ಅಗತ್ಯಕ್ಕೆ ತಕ್ಕ ಹಾಗೇ ಔಷಧ ನೀಡಲು ಆಗದಿರುವ ಬಗ್ಗೆ ಮೇಲಧಿಕಾರಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನಲೆ ಡಾ ಸಂಗಮೇಶ್ ಅವರಿಗೆ ಆಯುಷ್ ಇಲಾಖೆಯ ಆಯುಕ್ತರಿಂದ ನೋಟಿಸ್ ಜಾರಿಯಾಗಿದೆ.

ಆಯುಷ್ ಇಲಾಖೆ ಔಷಧಗಳು ಹಾಳಾಗಿರುವುದು ಹಾಗೂ ಅದನ್ನು ಸುಟ್ಟು ನಾಶ ಮಾಡಿದ ಬಗ್ಗೆ ಡಾ ಸಂಗಮೇಶ ಅವರು ಈ ಹಿಂದೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದು,ಆ ಬಗ್ಗೆಯೂ ನೋಟಿಸ್ ಮೂಲಕ ಪ್ರಶ್ನಿಸಲಾಗಿದೆ. ಇದೇ ರೀತಿ ವರ್ತನೆ ಮುಂದುವರೆದರೆ ಸೇವೆಯಿಂದಲೇ ವಜಾ ಮಾಡುವ ಬಗ್ಗೆಯೂ ಆಯುಷ್ ಆಯುಕ್ತರು ಎಚ್ಚರಿಕೆ ಸಹ ನೀಡಿದ್ದರು. ಆಯುಷ್ ಇಲಾಖೆಯಲ್ಲಿನ ಔಷಧಿಗಳ ಬಗ್ಗೆ ಡಾ ಸಂಗಮೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಔಷಧಿಗಳನ್ನು ಅನಧಿಕರತವಾಗಿ ಸುಟ್ಟಿರುವ ಬಗ್ಗೆ ದೂರು ಸಲ್ಲಿಸಿದ್ದರು. ಇದಾಗ ಬಳಿಕ ಅಲ್ಲಿನ ಮಹಿಳಾ ಅಧಿಕಾರಿ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಗುತ್ತಿಗೆ ವೈದ್ಯ ಸಂಗಮೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಗಮನಿಸಿ