ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ (Karwar): ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬಳಿಕ ಜಿಲ್ಲಾಡಳಿತ ಮುರುಡೇಶ್ವರ ಬೀಚ್ಗೆ (Murudeshwar Beach) ಪ್ರವಾಸಿಗರು ಕಡತೀರಕ್ಕೆ ಹೋಗದಂತೆ ನಿರ್ಬಂಧ ಹಾಕಿತ್ತು. ಇದರಿಂದಾಗಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಸಹ ಇಳಿಮುಖವಾಗಿತ್ತು. ಕ್ರಿಸ್ಮಸ್ ಹಾಗೂ ಹೊಸ ವರ್ಷ ಇರೋ (Christmas and New Year) ಕಾರಣ ಸಾಕಷ್ಟು ಭದ್ರತೆಯೊಂದಿಗೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಟ್ಟುನಿಟ್ಟಿನ ನಿಯಮದೊಂದಿಗೆ ಮುರುಡೇಶ್ವರ ಬೀಚ್ಗೆ ಹೆರಿದ್ದ ನಿರಂಬಂಧ ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕಳೆದ ಒಂದುವಾರದ ಹಿಂದಷ್ಟೆ ಕೋಲಾರದ ಮುಳುವಾಗಿಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಬಂದಿದ್ದ ಪ್ರವಾಸಿ ವಿದ್ಯಾರ್ಥಿಗಳಲ್ಲಿ ನಾಲ್ವರು ಕಡಲತೀರದಲ್ಲಿ ಆಟವಾಡುವ ವೇಳೆ ಸಮುದ್ರದ ಅಲೆಗೆ ಸಿಲುಕಿ ಮೃತ ಪಟ್ಟಿದ್ದರು.ಘಟನೆ ಬಳಿಕ ಜಿಲ್ಲಾಡಳಿತ ಡಿಸೆಂಬರ್ 11ರಿಂದಲ್ಲೇ ಮುರುಡೇಶ್ವರ ಕಡಲ ತೀರದಲ್ಲಿ(Murudeshwar Beach Open) ಪ್ರವಾಸಿಗರಿಗೆ ನಿಷೇಧ ಹಾಕಲಾಗಿತ್ತು.ಹೀಗಾಗಿ ನಿತ್ಯವೂ ಇಲ್ಲಿಗೆ ಬರುವ ಪ್ರವಾಸಿಗರು ದೇವರ ದರ್ಶನ ಪಡೆದು ದೂರದಿಂದಲ್ಲೇ ಕಡಲತೀರವನ್ನ ನೋಡಿ ವಾಪಸ್ ಆಗುತ್ತಿದ್ದರು.
ಇನ್ನೂ ಮುರುಡೇಶ್ವರ ಕಡಲತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹಾಕಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿಯೂ ಸಹ ಇಳಿಮುಖವಾಗುತ್ತಿತ್ತು. ಕಡಲ ತೀರದಲ್ಲಿ ಸದ್ಯ ಆರು ಮಂದಿಯಷ್ಟೆ ಲೈಪ್ ಗಾರ್ಡ್ ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಆರುಮಂದಿ ಲೈಪ್ ಗಾರ್ಡ್ ನೇಮಕವಾಗಬೇಕಿದೆ. ಇವೆಲ್ಲವನ್ನ ಸೇರಿದಂತೆ ಇನ್ನೂ ಹೆಚ್ಚಿನ ಸಿಬ್ಬಂದಿಗಳ ನೇಮಕ ಪ್ರಕ್ರೀಯೆ ಮಾಡಲು ಇನ್ನೂ ಒಂದು ತಿಂಗಳುಗಳ ಕಾಲಾವಕಾಶ ಬೇಕಾಗಬಹುದಾಗಿದೆ.ಆದರೆ ಅಲ್ಲಿಯ ತನಕ ಸಂಪೂರ್ಣವಾಗಿ ಬೀಚ್ ಬಂದ್ ಮಾಡಿ ಇಡೋದು ಕಷ್ಟವಾಗಲಿದೆ.ಹೀಗಾಗಿ ಬರುವ ಪ್ರವಾಸಿಗರಿಗೆ ಎಚ್ಚರಿಕೆ ಜೊತೆಗೆ ಪೊಲೀಸ,ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಕ್ರಿಸ್ಮಸ್ ಒಳಗೆ ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ.
ಇದೀಗ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಸಮೀಪಿಸುತ್ತಿರುವ ಕಾರಣ ಜಿಲ್ಲೆಯ ಬರುವ ಪ್ರವಾಸಿಗರ ಸಂಖ್ಯೆ ಕೂಡ ಏರಿಕೆ ಆಗುವ ಸಾಧ್ಯತೆ ಇದೆ.ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ನಿರಾಶೆಯಿಂದ ವಾಪಸ್ ಆಗದಂತೆ ನೋಡಿಕೊಳ್ಳು ಒಂದಿಷ್ಟು ಕಟ್ಟುನಿಟ್ಟಿನ ಕ್ರಮವನ್ನ ಜಾರಿ ಮಾಡಲಿದೆ. 100ರಿಂದ 150ಮೀಟರ್ ತನಕ ಮಾತ್ರ ಪ್ರವಾಸಿಗರಿಗೆ ನೀರಿಗಿಳಿಯಲು ಅವಕಾಶದ ಜೊತೆಗೆ ಅಪಾಯಕಾರಿ ಸ್ಥಳವನ್ನ ಗುರುತುಪಡಸಿ ಆ ಸ್ಥಳಕ್ಕೆ ಪ್ರವಾಸಿಗರು ಹೋಗದಂತೆ ಎಚ್ಚರಿಕೆ ನೀಡಲಿದೆ.
ಗಮನಿಸಿ