ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿನ ಗುಂಡಿಬೈಲ್ ಹೆಬೈಲ್ನಲ್ಲಿ ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸುಬ್ರಾಯ್ ಹನುಮಂತ ನಾಯ್ಕ ಇತ ತಮ್ಮ ಸಹೋದರನಾದ ನಾಗೇಶ್ ಹನುಮಂತ ನಾಯ್ಕ ಇವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಅಣ್ಣ ತಮ್ಮನ ನಡುವೆ ಈ ಮೊದಲು ಸಹ ಗಲಾಟೆ ಉಂಟಾಗಿತ್ತು ಎನ್ನಲಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಉಂಟಾಗಿ ತಮ್ಮ ನಾಗೇಶ್ ತನ್ನ ಅಣ್ಣ ಸುಬ್ರಾಯನ ಮೇಲೆ ಹಲ್ಲೆ ಮಾಡಿ ಆತನ ಕಾಲು ಮುರಿದ್ದು ಹಾಕಿದ್ದ ಎನ್ನಲಾಗಿದೆ.
ಬೇರೆ ಬೇರೆ ವಿಚಾರಕ್ಕೆ ಸಂಬಂಧಿಸಿ ಆಗಾಗ ಅಣ್ಣ ತಮ್ಮನ ನಡುವೆ ಗಲಾಟೆ ನಡೆಯುತ್ತಲ್ಲೆ ಇತ್ತು. ಎನ್ನಲಾಗಿದೆ. ಇಂದು ಸಹ ಊಟ ಮಾಡುವ ಸಮಯದಲ್ಲಿ ತಮ್ಮ ನಾಗೇಶ ಅಣ್ಣನಿಗೆ ಖಾಸಗಿ ವಿಚಾರವಾಗಿ ಚುಡಾಯಿಸಿದ್ದ ಎನ್ನಲಾಗಿದೆ. ಇದಕ್ಕೆ ಸಿಟ್ಟಾದ ಅಣ್ಣ ಮಂಜುನಾಥ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ..
ಸ್ಥಳಕ್ಕೆ ಹೊನ್ನಾವರ ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ತನಿಖೆಯಿಂದ ಕೊಲೆಯ ಬಗ್ಗೆ ನಿಖರ ಮಾಹಿತಿ ಸಿಗಬೇಕಿದೆ.
ಗಮನಿಸಿ