ಸುದ್ದಿಬಿಂದು ಬ್ಯೂರೋ ವರದಿ
Karwar: ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಭಾಗವಾಗಿರುವ ಸಿದ್ದಾಪುರ ಸೇರಿ ಕೆಲವು ಕಡೆಯಲ್ಲಿ ಭೂ ಕಂಪನವಾಗಿದೆ.ಎಂದು ಜನ ಹೇಳಿಕೊಂಡಿದ್ದು,ಆದರೆ ಎಲ್ಲಿಯೂ ಭೂ ಕಂಪನವಾಗಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸ್ಪಷ್ಟ ಪಡಿಸಿದ್ದು,ಯಾರು ಸಹ ಭಯಪಡಬೇಕಾಗಿಲ್ಲ ಎಂದಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ,ಯಲ್ಲಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಬಗ್ಗೆ ಸ್ಥಳೀಯರು ಹೇಳಿಕೊಂಡಿದ್ದು, ಬಳಿಕ ಸಾಮಾಜಿಕ ಜಾಲ ತಾಣ ಹಾಗೂ ಮಾಧ್ಯಮಗಳಲ್ಲಿಯೂ ಸುದ್ದಿ ಆಗಿತ್ತು. ಬಳಿಕ ಜಿಲ್ಲಾಡಳಿತ ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿದ್ದು, ಅಂತಹ ಯಾವುದೇ ಸಂದೇಶಗಳು ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲವೆಂದು ತಿಳಿಸಿರುವುದಾಗಿ. ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೂ ಯಾವುದೇ ಕಂಪನದ ಬಗ್ಗೆ ಅನುಭವಕ್ಕೆ ಬಂದಿದ್ದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ (1077) (08382229857) ಸಂಪರ್ಕಿಸಬಹುದಾಗಿ ಸಹ ತಿಳಿಸಿದ್ದಾರೆ.
ಕಂಪನದ ಬಗ್ಗೆ ತನಿಖೆ ನಡೆಯಲಿ..
ಭೂಮಿ ಕಂಪನವಾಗಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗದೆ ಇರುವ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದ್ದು, ಹಾಗಾದರೆ ಕಂಪಿಸಿರುವುದು ಯಾವ ಕಾರಣಕ್ಕೆ ಎಂದು ಸಾರ್ವಜನಿಕರು ಚರ್ಚೆ ಮಾಡುತ್ತಿದ್ದು, ಕಂಪನವಾಗಿರುವುದಷ್ಟೆ ಅಲ್ಲದೆ ದೊಡ್ಡ ಸದ್ದು ಸಹ ಕೇಳಿದೆ ಎನ್ನುವ ಬಗ್ಗೆ ಕಂಪನದ ಅನುಭವಾದ ಪ್ರದೇಶದ ಜನ ಹೇಳಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಇನಷ್ಟು ಚರ್ಚೆ ಆರಂಭವಾಗಿದ್ದು, ಅರಣ್ಯ ಪ್ರದೇಶಲ್ಲಿ ಏನಾದರೂ ಕಲ್ಲುಬಂಡೆ ಒಡೆಯುವುದಕ್ಕಾಗಿ ಸ್ಪೋಟ ಮಾಡಲಾಗಿದೇಯಾ.ಅಥವಾ ಕುಮಟಾ-ಶಿರಸಿ ಹೆದ್ದಾರಿ ಕಾಮಗಾರಿ ವೇಳೆ ಕಲ್ಲು ಬಂಡೆ ಒಡೆಯಲು ಸ್ಪೋಟಿಸಲಾಗಿದೆಯಾ..? ರಿಕ್ಟರ್ ಮಾಪಕದಲ್ಲಿ ಭೂಮಿ ಕಂಪಿಸಿರುವ ಬಗ್ಗೆ ದಾಖಲಾಗದೆ ಇದ್ದರೂ ಸಹ ಯಾವ ಕಾರಣಕ್ಕಾಗಿ ಭೂ ಕಂಪನಕ್ಕೆ ಕಾರಣವಾಗಿದೆ ಎನ್ನುವ ಬಗ್ಗೆ ಸಂಬಂಧಿಸಿದ ಇಲಾಖೆ ಮಾಹಿತಿ ಕಲೆ ಹಾಕಬೇಕಿದೆ ಎಂದು ಭೂಮಿ ಕಂಪನವಾದ ಪ್ರದೇಶದ ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.
ಗಮನಿಸಿ