suddibindu.in
ಹೊನ್ನಾವರ: ತಾಲೂಕಿನ ಗೇರುಸೊಪ್ಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಂಗಾರ ಕುಸುಮದ ಸಮೀಪ ಇರುವ ಶರಾವತಿ ವೀವ್ ಪಾಯಿಂಟ್ ಬಳಿ ಆಂಧ್ರ ಮೂಲದ ವ್ಯಕ್ತಿ ಓರ್ವನ ಮೃತದೇಹ ಪತ್ತೆಯಾಗಿದೆ.

ಆಂಧ್ರಪ್ರದೇಶದ ಮದನಪಲ್ಲಿ ಎಂಬಲ್ಲಿಯ ಶಾಂಭಶಿವ ಎನ್ನುವವರು ಮೃತದೇಹ ಎಂದು ತಿಳಿದು ಬಂದಿದ್ದು, ಆಸ್ತಿ ವಿಷಯಕ್ಕೆ ಕೊಲೆ ಮಾಡಿರುವ ಬಗ್ಗೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಆಂಧ್ರದ ಮದನಪಲ್ಲಿ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಾಗಿತ್ತು.ಆಂಧ್ರ ಪೊಲೀಸರ ತನಿಖೆ ಕೈಗೊಂಡಾಗ ಸುಪಾರಿ ನೀಡಿ ಸಂಬಂಧಿಕರಿಂದಲೇ ಕೊಲೆ ಮಾಡಿರುವ ಬಗ್ಗೆ ಮಾಹಿತಿ ದೊರೆತು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆಂಧ್ರದಿಂದ ಆರೋಪಿಗಳನ್ನು ಹೊನ್ನಾವರಕ್ಕೆ ಕರೆತಂದು ಮೃತದೇಹಪತ್ತೆ ಮಾಡಿದ್ದಾರೆ.

ಹೊನ್ನಾವರ ಠಾಣೆಗೆ ಈ ಕುರಿತು ಆಂಧ್ರ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ದೇಹ ಹೊನ್ನಾವರದಲ್ಲೆ ಮರಣೋತ್ತರ ಪರೀಕ್ಷೆ ಸಾಧ್ಯತೆ ಇದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ಬಳಿಕ ತನಿಖೆ ನಡೆದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ