suddibindu.in
ಹೊನ್ನಾವರ: ಸರಿಯಾದ ದಾಖಲೆ ಇಲ್ಲದೆ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದ್ದ ಅಡಿಕೆ ದಾಸ್ತಾನು ಮಳಿಗೆ ಮೇಲೆ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿರುವ ಘಟನೆ ಉತ್ತರಕನ್ನಡ ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದ ಕಲ್ಲಾಟ ಎಂಬಲ್ಲಿ ನಡೆದಿದೆ.
ಜಲವಳ್ಳಿ ಗ್ರಾಮದ ಕಲ್ಲಾಟ ಗ್ರಾಮದ ಸುರೇಶ ಗಣಪತಿ ಶೆಟ್ಟಿ, ಭಾಸ್ಕೆರಿ ನಿವಾಸಿಯಾಗಿರುವ ಇವರು ಕಲ್ಲಾಟದಲ್ಲಿರುವ ಅಡಿಕೆ ಗೋಡಾನ್ನಲ್ಲಿ ಸರಿಯಾದ ಯಾವುದೇ ದಾಖಲೆ ಇಲ್ಲದೆ. ತೆರಿಗೆ ಹಣವನ್ನ ಕಟ್ಟದೆ 3 ಸಾವಿರ ಕ್ವಿಂಟಲ್ಗೂ ಅಧಿಕ ಅಡಿಕೆಯನ್ನ ಚೀಲದಲ್ಲಿ ತುಂಬಿ ಇಟ್ಟುಕೊಂಡಿದ್ದಾರೆ ಎನ್ನುವ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಹುಬ್ಬಳ್ಳಿಯಿಂದ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ಹಣವನ್ನ ಕಟ್ಟದೆ ಸಾವಿರಾರು ಕ್ವಿಂಟಲ್ ಅಡಿಕೆಯನ್ನ ಸಾಗಾಟ ಮಾಡಿ ತೆರಿಗೆ ಹಣ ಉಳಿಸಿಕೊಳ್ಳುವ ಪ್ರಯತ್ನ ಇದಾಗಿತ್ತು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಹೊನ್ನಾವರದ ಕಲ್ಲಾಟದಲ್ಲಿರುವ ಅಡಿಕೆ ದಾಸ್ತಾನಿಲ್ಲಿ ಪರಿಶೀಲನೆ ನಡೆದಿರುವ ಬಗ್ಗೆ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ..
ಇದನ್ನೂ ಓದಿ