ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :83174 84063
ವಿಜಯಪುರ: ಕರ್ನಾಟಕ ರಾಜ್ಯದ ಕಟಬು ಕಟಬರ ಅಲೆ ಮಾರಿ ಜನಾಂಗದ ಜನಜಾಗೃತಿ ಸಮಾ ವೇಶ ಸಪ್ಟೆಂಬರ 01, ರವಿವಾರ ವಿಜಯಪುರ ಜಿಲ್ಲೆಯ ಜಾಗೃತ ಸಮಾವೇಶ ಇಂಡಿ ಪಟ್ಟಣದಲ್ಲಿ ಶಂಕರ ಪಾರ್ವತಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಎಂದು ಇಂಡಿ ತಾಲ್ಲೂಕ ಕಟಬರ ಸಮಾಜ ಇಂಡಿ ಉಪ ಅಧ್ಯಕ್ಷರು ಜಯಪ್ಪ ಕ್ಷತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ತಿಳಿಸಿದ್ದಾರೆ.

ಸಮಾಜ ಸಂಘಟನೆ ಉದ್ದೇಶದಿಂದ ನಮ್ಮ ಜನರಿಗೆ ಸರ್ಕಾರದ ಯಾವುದೇ ಸೌಲತ್ತುಗಳು ನೀಡಿಲ್ಲ ಇದರಿಂದ ನಾವು ಹಿಂದುಳಿದ ಜನಾಂಗ ಕಟಬು ಕಟಬರ ಸರ್ಕಾರದ ಕೆಲಸದಿಂದ ವಂಚಿತರಾಗಿದ್ದೇವೆ. ಈ ಕಾರ್ಯಕ್ರಮ ಯೋಜನೆಗಳು 10ನೇ ತರಗತಿ 80% ಹೆಚ್ಚು ಅಂಕ ತಗೊಂಡಿದ್ದಾರೆ.ಸನ್ಮಾನ. ಮತ್ತು ಪಿಯುಸಿಯಲ್ಲಿ 80% ಗಿಂತ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ, ಮಾಜಿ ಸೈನಿಕರಿಗೆ ಮತ್ತು ಸೈನ್ಯದಲ್ಲಿ ಮೃತರಾದ ಅವರ ಪತ್ನಿಯರಿಗೆ.ನಿವೃತ್ತಿ ಹೊಂದಿರುವ ಸರಕಾರಿ ನೌಕರರಿಗೆ ಸನ್ಮಾನ ಮಾಡಲಾಗುವುದು ಎಂದು ಕಟಬು ಕಟಬರ ತಾಲ್ಲೂಕ ಉಪ ಅಧ್ಯಕ್ಷ ಜಯಪ್ಪ ಕ್ಷತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ‌.

ಈ ಕಾರ್ಯಕ್ರಮಕ್ಕೆ ಕಟಬರ ತಾಲ್ಲೂಕ ಅಧ್ಯಕ್ಷ ಭೀ ಮಾಶಂಕರ ಕ್ಷತ್ರಿ, ಕಟಬು ಕಟಬರ ರಾಜ್ಯ ಅಧ್ಯಕ್ಷರಾದ ಜಗದೀಶ ಕ್ಷತ್ರಿ, ಜಿಲ್ಲಾ ಕಟಬು ಕಟಬರ ಅಧ್ಯಕ್ಷರು ಶಿವಮೂರ್ತಿ ಕಾಟಕರ, ಮತ್ತು ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲ ಮತ್ತು ಮಾಜಿ ಶಾಸಕರಾದ ರಮೇಶ ಭೂಸನೂರ, ಸಿಂದಗಿ ಮತ್ತು ಅಲಮೇಲ ತಾಲ್ಲೂಕ ಕಟಬು ಕಟಬರ ಅಧ್ಯಕ್ಷರಾದ ಸಂತೋಷ ಕ್ಷತ್ರಿ, ಕರಣ ಕ್ಷತ್ರಿ ಪರಪ್ಪನ ಅಗ್ರಹಾರ (ಜೈಲರ್) ಅರುಣಕುಮಾರ ಜಿಲ್ಲಾ ಅಧ್ಯಕ್ಷ ಕಲ್ಬುರ್ಗಿ.

ಸಮಾಜ ಕಲಬುರಗಿ, ರಾಜು ಪಾಚಿಂಗೆ ಮಾಜಿ ರಾಜ್ಯಧ್ಯಕ್ಷರು ಕಟಬು ಸಮಾಜ, ವಿಲಾಸ ಜಿ ಶಿಂದೆ ರಾಜ್ಯ ಸಂಚಾಲಕರು ಕಟಬು ಸಮಾಜ ಶಿಳ್ಳೆಖ್ಯಾತ ಸಮಾಜ, ಮಹೇಶ ಶಿಂದೆ ಜಿಲ್ಲಾ ಉಪಾಧ್ಯಕ್ಷರು ಕಟಬು ಸಮಾಜ ಬಿಜಾಪುರ,ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.ಸಮಾಜ ನಾಯಕರು ಗಣ್ಯರು ಬರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಸಮಾರಂಭಕ್ಕೆ ನಮ್ಮ ಸಮುದಾಯದ ಇನ್ನು ಮುಂದಾದರೂ ಸರಕಾರದ ಏನಾದರೂ ಅನುದಾನ: ಸಿಗಲಿ ಎಂದು ತಾಲ್ಲೂಕ ಉಪ ಅಧ್ಯಕ್ಷರು ಜಯಪ್ಪ ಕ್ಷತ್ರಿ ಸರ್ಕಾರದ ಗಮನಕ್ಕೆ ಬರಲೆಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕಟಬರ,ತಾಲ್ಲೂಕ ಅಧ್ಯಕ್ಷ ಭೀಮಾಶಂಕರ, ಜಯಪ್ಪ ಕ್ಷತ್ರಿ, , ,ಪಂಡಿತ ಶಿಂಧೆ ಅಗರಖೇಡ ದೀಪಕ ಶಿಂದೆ, ಸುಭಾಸ್ ಶಿಂದೆ,ಮಂಜುನಾಥ ಕ್ಷತ್ರಿ,ಶಾಂತೇಶ್ ಕ್ಷತ್ರಿ,ರವಿ ಶಿಂದೆ ಅಗರಖೇಡ, ಈ ಎಲ್ಲಾ ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ