suddibindu.in
Karwar: ಕಾರವಾರ:ಶಿರೂರು ಗುಡ್ಡ ಕುಸಿತ( shiruru landslide) ಘಟನೆಯಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಣವಾನಂದ ಸ್ವಾಮಿಜಿ ಮುಂದಾಳತ್ವದಲ್ಲಿ ಒಂದು ದಿನದ ಉಪವಾಸ ಪ್ರತಿಭಟನೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ (National Highway 66)ಗುತ್ತಿಗೆ ಪಡೆದ IRB ಕಂಪನಿ ವಿರುದ್ಧ ಘೋಷಣೆ ಕೂಗಿ, ರಾಜ್ಯ ಮತ್ತು ಕೇಂದ್ರ ಸರಕಾರ (central government )ಮೃತ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಸ್ವಾಮಿಜಿ ಆಗ್ರಹಿಸಿದ್ದಾರೆ. ಶಿರೂರು ಗುಡ್ಡಕುಸಿತ ಉಂಟಾಗಿ ಎರಡು ತಿಂಗಳೂ ಸಮೀಪಿಸುತ್ತಾ ಬಂದರು ಇದುವರಗೆ ನಾಪತ್ತೆಯಾಗಿರುವ ಜಗನ್ನಾಥನ ನಾಯ್ಕ, ಲೋಕೇಶ ನಾಯ್ಕ ಕುಟುಂಬಕ್ಕೆ ಇನ್ನೂ ಸಹ ಪರಿಹಾರ ನೀಡಿಲ್ಲ.ಇನ್ನೂ ಘಟನೆಯಲ್ಲಿ ಉಳುವರೆ ಗ್ರಾಮದಲ್ಲಿ ಅನೇಕರು ಮನೆ ಕಳೆದುಕೊಂಡಿದ್ದಾರೆ ಅವರಿಗೂ ಸಹ ಇನ್ನೂ ಪರಿಹರ ಸಿಕ್ಕಿಲ್ಲ ಅವರೆಲ್ಲರಿಗೂ ಪರಿಹಾರ ನೀಡುವಂತಾಗಬೇಕೆ ಎಂದು ಒತ್ತಾಯಿಸಲಾಯಿತು.
ನಾಪತ್ತೆಯಾಗಿರುವ ಜಗನ್ನಾಥ ಕುಟುಂಬದವರಿಗ ಉದ್ಯೋಗ ನೀಡಿವ ಭರವಸೆ ನೀಡಿದೆ ಹೊರೆತು ಇನ್ನೂ ಯಾವುದೇ ಉದ್ಯೋಗ ನೀಡಲ್ಲ. ಈ ಕುಟುಂಬ ಇನ್ನೂ ಕಣ್ಣೀರಿನಲ್ಲಿ ಕಾಲ ಕಳೆಯುವಂತೆ ಆಗಿದೆ. ಹೀಗಾಗಿ ಈ ಕುಟುಂಬಕ್ಕೆ ನ್ಯಾಯ ನೀಡವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಮೃತ ಜಗನ್ನಾಥ ಹಾಗೂ, ಲೊಕೇಶ್ ಕುಟುಂಬದವರು ಭಾಗವಹಿಸಿದ್ದಾರೆ.
ಇದನ್ನೂ ಓದಿ