suddibindu.in
ಕಾರವಾರ : ವಾಹನ ಸವಾರರಿಗೆ ದಂಡ ಹಾಕುವ ಸಂದರ್ಭದಲ್ಲಿ ದಂಡದ ಹಣವನ್ನು ಚಿನ್ನದ ವ್ಯಾಪಾರಿ ಖಾತೆಗೆ ವರ್ಗಾಯಿಸಿದ ಪ್ರಕರಣದಲ್ಲಿ ಭಟ್ಕಳ ನಗರ ಠಾಣೆಯ ಪಿ.ಎಸ್.ಐ ಯಲ್ಲಪ್ಪ ಅವರನ್ನು ಅಮಾನತು ಗೊಳಿಸಿ ಉತ್ತರಕ್ನಡ ಪೋಲಿಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಭಟ್ಕಳದ ನಗರಠಾಣೆ ಪಿ.ಎಸ್.ಐ ಯಲ್ಲಪ್ಪ ಅವರು ವಾಹನ ಸವಾರರಿಂದ ದಂಡ ವಸೂಲಿ ಮಾಡುವ ಸಂದರ್ಭದಲ್ಲಿ ದಂಡದ ಮೊತ್ತವನ್ನು ನಗರದ ಚಿನ್ನದ ವ್ಯಾಪಾರಿ ವಿನಾಯಕ ಮಾರುತಿ ಶೇಟ್ ಎನ್ನುವವರ ಹೆಸರಿನ ಪೋನ್ ಪೇ ಖಾತೆಗೆ ವರ್ಗಾಯಿಸುತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ರಿಯಾಲಿಟಿ ಚಕ್ ನಡೆಸಿದ ಭಟ್ಕಳದ ಕೆಲ ವರದಿಗಾರರು ಹೆಲ್ಮೇಟ್ ಧರಿಸದೇ ಪೋಲಿಸರ ಬಳಿ ಹೋಗಿದ್ದಾರೆ. ಹೆಲ್ಮೇಟ್ ರಹಿತ ಪ್ರಯಾಣಕ್ಕಾಗಿ ಪಿ.ಎಸ್.ಐ ಯಲ್ಲಪ್ಪ ಅವರು 500 ರೂಪಾಲಿ ದಂಡ ಕಟ್ಟುವಂತೆ ಹೇಳಿದ್ದಾರೆ.
” ನಮ್ಮ ಬಳಿ ನಗದು ಇಲ್ಲ ಯು.ಪಿ.ಐ ಟ್ರಾನ್ಪರ್ ಮಾಡುವುದಾಗಿ ವರದಿಗಾರರು ಕೇಳಿ ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಿ.ಎಸ್.ಐ ಯಲ್ಲಪ್ಪ ಅವರು ಪೋಲಿಸ್ ಇಲಾಖೆ ನೀಡಿದ ಡಿಜಿಟಲ್ ದಂಡ ವಸೂಲಿ ಪ್ರಕ್ರಿಯೆಯನ್ನು ಬಳಸದೇ ಒಂದು ನಂಬರ್ ನೀಡಿ ಈ ನಂಬರ್ ಗೆ ಹಣ ಸಂದಾಯ ಮಾಡುವಂತೆ ತಾಕೀತೂ ಮಾಡಿದ್ದಾರೆ. ಅದರಂತೆ ವರದಿಗಾರರು ಹಣ ಸಂದಾಯ ಮಾಡಿದ್ದು ಆ ಸಂದರ್ಭದಲ್ಲಿ ಈ ಮೊಬೈಲ್ ಸಂಖ್ಯೆ ಪೋಲಿಸ್ ಇಲಾಖೆಯ ಅಧೀಕೃತ ಸಂಖ್ಯೆ ಅಲ್ಲ ಎಂಬುದು ಗಮನಕ್ಕೆ ಬಂದಿದೆ.
ಈ ಕುರಿತಂತೆ ಎಲ್ಲಾ ಮಾದ್ಯಮಗಳಲ್ಲೂ ಸುದ್ದಿ ಬಿತ್ತರವಾದರೂ ಎಚ್ಚೆತ್ತುಕೊಳ್ಳದ ಮೇಲಾಧಿಕಾರಿಗಳು , ಒಂದು ಸೂಚನಾ ಪತ್ರ ಹೊರಡಿಸಿ “ಉದಯ್ ನಾಯ್ಕ ಎನ್ನುವವರು ಹೆಲ್ಮೆಟ್ ಧರಿಸದೇ ವಾಹನ ಸಂಚಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಿ.ಎಸ್.ಐ ಯಲ್ಲಪ್ಪ ಅವರು 500 ರೂಪಾಯಿ ದಂಡ ಕಟ್ಟುವಂತೆ ಹೇಳಿದ್ದಾರೆ. ಆದರೆ ಉದಯ್ ನಾಯ್ಕ ಎನ್ನುವವರ ಬಳಿ ನಗದು ಇಲ್ಲದ ಕಾರಣ ಸ್ಥಳದಲ್ಲೇ ಇದ್ದ ವಿನಾಯಕ ಶೇಟ್ ಎನ್ನುವವರ ಬಳಿ ನಗದು ಪಡೆದು ಪೋಲಿಸರಿಗೆ ನೀಡಿ ವಿನಾಯಕ ಶೆಟ್ ಎನ್ನುವವರಿಗೆ ಪೋನ್ ಪೇ ಮಾಡಿದ್ದಾರೆ. ಎಂದು ತೆಪೇ ಒರೆಸುವ ಕಾರ್ಯಕ್ಕೆ ಮುಂದಾಗಿದ್ದರು.
ಆದರೆ ನಗದು ರಹಿತ ಸಂದರ್ಭದಲ್ಲಿ ದಂಡ ವಸುಲಾತಿಗಾಗಿ ಪೋಲಿಸ್ ಇಲಾಖೆಯಿಂದ ನೀಡಿದ ಕ್ಯೂಆರ್ ಕೋಡ್ ಅನ್ನು ಯಾಕೆ ಬಳಸಿಲ್ಲ ಎನ್ನುವ ಬಗ್ಗೆ ತೀವ್ರ ಟೀಕೆ ಬಂದ ಹಿನ್ನೆಲೆಯಲ್ಲಿ. ಪಿ.ಎಸ್.ಐ ಅವರನ್ನು ಅಮಾನತು ಗೊಳಿಸಲಾಗಿದೆ.
ಇದನ್ನೂ ಓದಿ