suddibindu.in
ಕುಮಟಾ : ಶಿರೂರು ಗುಡ್ಡಕುಸಿತದ ಎರಡನೇ ಹಂತದ ಕಾರ್ಯಚರಣೆಯ ಸುದ್ದಿಗಾಗಿ ತೆರಳುತ್ತಿದ್ದ ವರದಿಗಾರರ ಕಾರು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ.
ಕೇರಳ ಮೂಲದ ಖಾಸಗಿ ಚಾನಲ್ ಒಂದರ ವರದಿಗಾಗರು ತೆರಳುತ್ತಿದ್ದ ಕಾರು ಚಾಲಕ ಎದುರಿಗೆ ಬಂದ ನಾಯಿಯನ್ನ ತಪ್ಪಿಸಲು ಹೋಗಿ ಕಾರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ. ಇದರಿಂದಾಗಿ ಕಾರಿನಲ್ಲಿದ್ದ ಮೂವರು ವರದಿಗಾರರಿಗೆ ಗಾಯವಾಗಿದೆ. ತಕ್ಷಣ ಅವರನ್ನ ಕುಮಟಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ
- ಕರಾವಳಿ ಉತ್ಸವ : ಐತಿಹಾಸಿಕ ಸ್ಥಳ, ಅಲ್ಲಿಗೆ ಭೇಟಿ ನೀಡಿದ ಗಣ್ಯ ವ್ಯಕ್ತಿಗಳ ಛಾಯಾಚಿತ್ರ ಪ್ರದರ್ಶನ
- ಆಕಾಶದಲ್ಲೇ ಮಾನವೀಯತೆ: ವಿಮಾನದಲ್ಲಿ ಅಸ್ವಸ್ಥ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್
- Indian-Navy/ನೌಕಾನೆಲೆ ವಜ್ರಕೋಶದಲ್ಲಿ ರಹಷ್ಯ ಸ್ಪೋಟ ವಿಚಾರ : ನೌಕಾಪಡೆ ಸ್ಪಷ್ಟನೆ
ಅಪಘಾತದಲ್ಲಿ ಗಾಯಗೊಂಡ ವರದಿಗಾರರು ಶಿರೂರು ಗುಡ್ಡಕುಸಿತ ಘಟನೆಯ ಎರಡನೇ ಹಂತದ ಕಾರ್ಯಚರಣಗೆಯ ವರದಿ ಮಾಡಲು ಕೇರಳದಿಂದ ಶಿರೂರುಗೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..





