suddibindu.in
ಕುಮಟಾ : ತಾಲೂಕಿನ ಯಾಣದ ಭೈರವೇಶ್ವರ ಶಿಖರದ ಬಳಿ ಗುಡ್ಡ ಕುಸಿದಿದ್ದು ಹಾಗೂ ಮೂರು ಅಂಗಡಿಗಳ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿದೆ.ಇನ್ನೂ ಸ್ವಲ್ಪ ದಿನಗಳಲ್ಲಿ ಮಣ್ಣು ತೆರುವು ಮಾಡಿಸುತ್ತೇವೆ ಪ್ರವಾಸಿಗರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ ಗಜು ಪೈ ತಿಳಿಸಿದ್ದಾರೆ.
ಸುಮಾರು ಅರ್ಧ ಎಕರೆ ದರೆ ಜರಿದಿದ್ದು, ಅಂಗಡಿಯೊಂದು ನಾಶವಾಗಿದೆ. ಶಿರಸಿ ಕಡೆಯಿಂದ ಬರುವ ದಾರಿ ಬಂದ್ ಆಗಿದೆ. ಪಾರ್ಕಿಂಗ್ ಸ್ಥಳದಿಂದ ಗಣಪತಿ ದೇವಸ್ಥಾನದವರೆಗೆ ನೀರು ಹರಿಯುವ ಪೈಪ್ ಗಳು ಮುಚ್ಚಿದ್ದು, ನೀರು ರಸ್ತೆಯಲ್ಲಿ ಹರಿಯುತ್ತದೆ.
ಇದನ್ನೂ ಓದಿ
- ಅಂಕೋಲಾದ ಹೊಟೇಲ್ ಒಂದರ ಮೇಲೆ ಹಠಾತ್ ದಾಳಿ : ಮಾಲೀಕರಿಗೆ ನೋಟಿಸ್ ಜಾರಿ
- Teacher Award ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ : ತಿಮ್ಮಪ್ಪ ನಾಯಕ, ಮಾಲಿನಿ ನಾಯಕ ಸೇರಿ ಹಲವರು ಆಯ್ಕೆ
- ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪುರಸ್ಕಾರಕ್ಕೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಪುರಸ್ಕೃತರ ಹೆಸರು ಪ್ರಕಟ
ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸುಮಾರು 150 ಮೀಟರ್ ದೂರದಿಂದಲೇ ವೀಕ್ಷಣೆಗೆ ಅನುವು ಮಾಡಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಕುಮಟಾ ಶಾಸಕರು ದಿನಕರ ಶೆಟ್ಟಿ ಹಾಗೂ ಸಂಸದರಾದ ಕಾಗೇರಿ ಅವರಿಗೂ ಮನವಿ ಮಾಡಿಕೊಂಡಿದ್ದು ಆದಷ್ಟು ಬೇಗ ಮಣ್ಣು ತೆರವು ಶಾಶ್ವತ ರಸ್ತೆ ಮಾಡಿಕೊಡಿ ಹೇಳಿದ್ದೇವೆ ಎಂದರು