suddibindu.in
ಅಂಕೋಲಾ: ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಟಿಂಬರ್ ಲಾರಿ ಸಿಲುಕಿಕೊಂಡಿರುವುದು ಕಾರ್ಯಚರಣೆ ಸಮಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದ್ದು ಈ ಕ್ಷಣದವರೆಗೂ ಸಹ ಚಾಲಕನ ಮೊಬೈಲ್ ಲೊಕೇಷನ್ ಅದೇ ಸ್ಥಳದಲ್ಲಿ ಸಿಗುತ್ತಿದೆ ಎನ್ನಲಾಗಿದೆ.
ಘಟನೆಯ ದಿನದಂದು ಹಳಿಯಾಳದಿಂದ ಕೇರಳಕ್ಕೆ ಟಿಂಬರ್ ಸಾಗಿಸುತ್ತಿದ್ದ ಬೆಂಜ್ ಲಾರಿ KA 15, A 7427 ( ಸಾಗರ ನೋಂದಣಿ ಹೊಂದಿದ್ದು) ಶಿರೂರು ಬಳಿ ನಡೆದ ದುರಂತದಲ್ಲಿ ಸಿಲುಕಿಕೊಂಡಿತ್ತು,ಅದರಲ್ಲಿ ಚಾಲಕ ಅರ್ಜುನ್ ಕೂಡ ಸಿಲುಕಿಕೊಂಡಿದ್ದ, ಘಟನೆಗೆ ಸಂಬಂಧಿಸಿ ಲಾರಿ ಕೇಳರ ಮೂಲದ ಮುಬಿನ್ ಎಂಬುವವರಿಗೆ ಸೇರಿದ್ದಾಗಿದೆ, ಈಗಾಗಲೇ ಘಟನಾ ಸ್ಥಳಕ್ಕೆ ಲಾರಿ ಮಾಲೀಕರು ಹಾಗೂ ಚಾಲಕನ ಸಂಬಂಧಿಕರು ಆಗಮಿಸಿದ್ದಾರೆ.
ಇದನ್ನೂ ಓದಿ
- ಆರ್ಟಿಐ ಹೆಸರಿನಲ್ಲಿ ಕೋಟಿ ಹಣದ ಬೇಡಿಕೆ: ಮುಂಡಗೋಡ-ಹುಬ್ಬಳ್ಳಿ ಗ್ಯಾಂಗ್ ಪೊಲೀಸ್ ಬಲೆಗೆ..!
- ಐದು ವರ್ಷ ಅಪಘಾತವಿಲ್ಲ.!ಭಟ್ಕಳದ ಚಾಲಕ ರಾಮಚಂದ್ರ ನಾಯ್ಕ ಅವರಿಗೆ ಬೆಳ್ಳಿ ಪದಕದ ಗೌರವ
- ನ್ಯಾಯ ಸಿಗದಿದ್ದರೆ ಬಸ್ಸ್ಟ್ಯಾಂಡ್ನಲ್ಲಿ ಧರಣಿ : ಆಟೋ ಚಾಲಕರಿಂದ ಎಚ್ಚರಿಕೆ
ಕಾರ್ಯಚರಣೆ ಸಮಯದಲ್ಲಿ ಮಣ್ಣಿನ ಅಡಿಯಲ್ಲಿ ಲಾರಿ ಇರುವ ಬಗ್ಗೆ ಜಿಲ್ಲಾಡಳಿತದಿಂದ ಲಾರಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಸಂಪೂರ್ಣವಾಗಿ ಲಾರಿಯನ್ನ ಹೊರ ತೆಗೆಯುವ ಸಾಧ್ಯತೆ ಇದೆ.







