www.suddibindu.in
Karwar:ಕಾರವಾರ: ನಗರದ ಲಂಡನ್ ಸೇತುವೆಯ ಬಳಿ ಇಂದು ಶುಕ್ರವಾರ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಕಾರುಗಳು ಜಖಂ ಗೊಂಡಿವೆ.
ನಗರದ ರಾಷ್ಟ್ರೀಯ ಹೆದ್ದಾರಿ 66 ರ ಟನಲ್ ಬಳಿ ಘಟನೆ ನಡೆದಿದೆ. ಬಿಣಗಾ ಕಡೆಯಿಂದ ಬರುವಾಗ ಲಂಡನ್ ಸೇತುವೆಯ ಬಳಿ ಗೋವಾ ರಾಜ್ಯದ ನೊಂದಣಿ ಇರುವ ಕಾರಿನ ಚಾಲಕ ಬ್ರೇಕ್ ಹಾಕಿದ್ದಾನೆ. ತಕ್ಷಣ ಅದರ ಹಿಂಬದಿ ಇದ್ದ ಕರ್ನಾಟಕ ನೊಂದಣಿಯ ತವೇರಾ ಕಾರಿನ ಚಾಲಕ ಕೂಡ ಬ್ರೇಕ್ ಹಾಕಿ ವೇಗವನ್ನು ಕಡಿಮೆ ಮಾಡಿದ್ದಾನೆ.
ಇದನ್ನೂ ಓದಿ
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆಡಳಿತ ಕಚೇರಿ ನವೀಕರಣಕ್ಕೆ ಐದು ಲಕ್ಷ ಘೋಷಿಸಿದ ಶಾಸಕ ಸತೀಶ್ ಸೈಲ್
- ಗೃಹ ಸಚಿವರನ್ನ ಜಿಲ್ಲೆಗೆ ಸ್ವಾಗತಿಸಿಕೊಂಡ ಸಚಿವ ಮಂಕಾಳ್ ವೈದ್ಯ
- ಮರಕ್ಕೆ ಗುದ್ದಿದ ಸಿಲೆಂಡರ್ ತುಂಬಿದ ವಾಹನ : ವಾಹನದೊಳಗೆ ಸಿಲುಕಿಕೊಂಡ ಚಾಲಕ
ಆದರೆ ಹಿಂದಿನಿಂದ ಬಂದ ತೆಲಂಗಾಣ ನೊಂದಣಿಯ ಮಹೇಂದ್ರಾ ಕಾರು ಚಾಲಕನ ನಿಯಂತ್ರಣಕ್ಕೆ ಸಗದೇ ತವೇರಾ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತವೇರಾ ಕಾರು ಮುಂದಿನ ಕಾರಿಗೆ ಬಡಿದು ಮೂರು ಕಾರುಗಳು ಕೂಡ ಜಖಂ ಆಗಿವೆ.ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಾರವಾರದ ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.