suddibindu.in
ಹಾವೇರಿ : ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೆಳ್ಳಂ ಬೆಳಿಗ್ಗೆ 13ಮಂದಿ ಮೃತಪಟ್ಟಿರುವ ಘಟನೆ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರಾಗಿದ್ದು, ಇವರೆಲ್ಲಾರು ಬೆಳಗಾವಿ ಜಿಲ್ಲೆಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ವಾಪಸ್ ಭದ್ರಾವತಿಗೆ ಹೋಗುತ್ತಿರುವಾಗ ಘನಘೋರ ಅಪಘಾತ ನಡೆದಿದೆ.ತಡ ರಾತ್ರಿ ಮೂರು ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಟಿಟಿ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಮೃತದೇಹಗಳು ಸಹ ಗುರುತು ಸಿಗದ ಪರಿಸ್ಥಿತಿ ಉಂಟಾಗಿದೆ
ಇದನ್ನೂ ಓದಿ
- ಹೊಂಡೆ ಉತ್ಸವದಲ್ಲಿ ಬಿಜೆಪಿ ರಾಜ್ಯ ಉಪಾದ್ಯಕ್ಷೆ ರೂಪಾಲಿ ನಾಯ್ಕ್ ಕುಟುಂಬಸ್ಥರೊಂದಿಗೆ ಬಾಗಿ
- ಹೊಂಡೆ ಉತ್ಸವದಲ್ಲಿ ಗಮನ ಸೆಳೆದ “ಕಾಂತಾರ ಚಾಪ್ಟರ್ 1″ ದೃಶ್ಯ
- ಅಂಕೋಲಾದಲ್ಲಿ ಹಿಂಡಲಕಾಯಿಯಿಂದ ಹೊಡೆದಾಟ !
ವಾಹನದಲ್ಲಿ ಸಿಲುಕಿರುವ ಎಲ್ಲಾ ಮೃತದೇಹವನ್ನ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟು ಹೊರ ತೆಗೆದಿದ್ದಾರೆ.




