suddibindu.in
Karwar: ಕಾರವಾರ : ಉತ್ತರಕನ್ನಡ ಜಿಲ್ಲೆಯ( Uttar Kannada district) ಕರಾವಳಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹವಮಾನ ಇಲಾಖೆ ನಾಳೆ ಜಿಲ್ಲಾದ್ಯಂತ ರೆಡ್ ಅಲರ್ಟ್(Red alert) ಘೋಷಣೆ ಮಾಡಿದೆ.
ಜಿಲ್ಲೆಯ ಕಾರವಾದಿಂದ ಹಿಡಿದು ಕರಾವಳಿ ತಾಲೂಕು ಸೇರಿ ಮಲೆನಾಡು ಹಾಗೂ ಬಯಲು ಸೀಮೆ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದಲೂ ಮಳೆ ಆರ್ಭಟ ಜೋರಾಗಿದೆ. ಎರಡು ದಿನಗಳ ಕಾಲ ಸುರಿದ ಮಳೆಯಿಂದ ಜಿಲ್ಲೆಯ ಅನೇಕ ಕಡೆಯಲ್ಲಿ ಮಳೆ ಈಗಾಗಲೇ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಇನ್ನೂ ಸಹ ಮೂರು ದಿನಗಳ ಕಾಲ ಜಿಲ್ಲಾದ್ಯಂತ ವ್ಯಾಪಕ ಮಳೆ ಉಂಟಾಗಲಿದ್ದು, ತಗ್ಗು ಪ್ರದೇಶದ ಜನ ಎಚ್ಚರಿಕೆಯಿಂದ ಇರುವಂತೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ
- ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಬಸ್ ಸಂಚಾರಕ್ಕೆ ರೂಪಾಲಿ ನಾಯ್ಕ ಮನವಿ
- ಬನವಾಸಿ,ಸಿದ್ದಾಪುರ ಸಾಗರಕ್ಕೆ ಸೇರ್ಪಡೆ ತಿರುಕನ ಕನಸು: ಶಾಸಕ ಶಿವರಾಮ ಹೆಬ್ಬಾರ
- “ಚಿನ್ನದ ಬೆಲೆ ಕುಸಿತದ ನಿರೀಕ್ಷೆ: ಜಾಗತಿಕ ಹೂಡಿಕೆದಾರರ ಗಮನ ಫೆಡ್ ಸಭೆಯತ್ತ” ಬಂಗಾರದ ಪ್ರಿಯರಿಗೆ ‘ಬಂಗಾರ’ ದ ಸುದ್ದಿ
ಭಾರೀ ಮಳೆ ಆಗಲಿರುವ ಕಾರಣ ಮೀನುಗಾರರು ಮೀನುಗಾರಿಕೆಗಾಗಿ ನೀರಿಗೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ಇನ್ನೂ ಜಿಲ್ಲೆಗೆ ಬರುವ ಪ್ರವಾಸಿಗರು ಕಡಲತೀರ ಹಾಗೂ ಜಲಪಾತ ಕಡೆ ಹೋಗದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.