suddibindu.in
ಶಿರಸಿ: ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಿಸಲು ಹೋಗಿದ್ದ ಶಿರಸಿ ಸಿದ್ದಾಪುರ ಶಾಸಕರ ಭೀಮಣ್ಣ ನಾಯ್ಕ ಅವರ ಮೇಲೆ ಜೇನು ದಾಳಿ ಮಾಡಿರುವ ಘಟನೆ ನಡೆದಿದೆ.

ಮುಖದ ಭಾಗದಲ್ಲಿ ಜೇನು ದಾಳಿ ಮಾಡಿದ್ದು, ಮುಖದ ಭಾಗದಲ್ಲಿ ಗಾಯವಾಗಿದೆ.ತಕ್ಷಣ ಅವರನ್ನ ಶಿರಸಿ ನಗರದ .ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.