suddibindu.in
ಕುಮಟಾ : ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದು ಹಿಟಾಚಿ,ಕ್ರೇನ್ ಜಖಂಗೊಂಡು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ತಾರೀಬಾಗಿನಲ್ಲಿ ಘಟನೆ.
ಕುಮಟಾದ ತಾರೀಬಾಗಿಲಿನಲ್ಲಿ ಅಘನಾಶಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕುಂದಾಪುರದ ಸೈಂಟ್ ಅಂಟೋನಿ ಕನ್ಸ್ಟಕ್ಷನ್ ಈ ಕಾಮಗಾರಿಯನ್ನ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದೆ. ಈ ಕಾಮಗಾರಿ ಆರಂಭದಿಂದಲ್ಲೂ ಸ್ಥಳೀಯರು ಕಳಪೆ ಕಾಮಗಾರಿ ಆಗುತ್ತಿರುವ ಬಗ್ಗೆ ಆರೋಪಿಸುತ್ತಲೆ ಬಂದಿದ್ದಾರೆ.ಆದರೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯಾಗಲಿ ಸಂಬಧಿಸಿದ ಅಧಿಕಾರಿಗಳು ಆ ಬಗ್ಗೆ ಯಾವುದೇ ಜಾಗ್ರತೆ ವಹಿಸದೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿಕೊಂಡು ಬರುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸುತ್ತಲೆ ಬಂದಿದ್ದಾರೆ.
ಇದನ್ನೂ ಓದಿ
- ಸಿಎಂ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು; ಶೇಷಾದ್ರಿಪುರಂ ಖಾಸಗಿ ಆಸ್ಪತ್ರೆಗೆ ದಾಖಲು
- ನ 20ಕ್ಕೆ ಕಾರವಾರದಲ್ಲಿ ಕನಿಷ್ಠ ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ ಸಮಾವೇಶ
- ಟೆಂಪೋ–ಟಿಪ್ಪರ್ ನಡುವೆ ಅಪಘಾತ, 12 ಪ್ರಯಾಣಿಕರಿಗೆ ಗಾಯ
ಕೂಡ ಕಾಮಗಾರಿ ಮಾಡುತ್ತಿರುವಾಗ ಪಿಲ್ಲರ್ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್ಗಳು ಕುಸಿದು ಬಿದಿದ್ದೆ. ಇದರಿಂದಾಗಿ ಸೇತುವೆಯ ಕೇಳಭಾಗದಲ್ಲಿ ನಿಂತಿದ್ದ ಹಿಟಾಚಿ,ಕ್ರೇನ್ ಜಖಂಗೊಂಡಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ಸೇತುವೆಯ ಕಳಪೆ ಕಾಮಗಾರಿ ಕಂಡು ಗ್ರಾಮಸ್ಥರ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯವರು ಸ್ಥಳೀಯರ ಮೇಲೆ ಏರಗಿ ಬಂದಿದ್ದಾರೆನ್ನಲಾಗಿದ್ದು, ಕೆಲ ಸಮಯ ಸ್ಥಳೀಯರು ಹಾಗೂ ಗುತ್ತಿಗೆ ಕಂಪನಿ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ಸಹ ಉಂಟಾಗಿದೆ.







