suddibindu.in
ಬೆಂಗಳೂರು: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಘೋಷಣೆ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಗೆಲ್ಲಲೇ ಬೇಕಾದ ಅಭ್ಯರ್ಥಿ ಹಾಕುವ ಒತ್ತಡ ಪಕ್ಷದ ನಾಯಕರಿಗಿದೆ. ಇದರಿಂದ ಸಂಘ ಪರಿವಾರದ ಗೋಪಾಲ ಜೀ ಅವರನ್ನು ಅಭ್ಯರ್ಥಿಯನ್ನಾಯಾಗಿಸಿದರೆ ಗೆಲುವು ಸುಲಭ ಆಗಬಹುದು ಎಂಬ ಲೆಕ್ಕಾಚಾರದಲ್ಲಿದೆ.

ಸಂವಿಧಾನ ಬದಲಿಸಲೇ ಬಂದಿದ್ದೇವೆ ಎಂದು ಸಚಿವನಾಗಿದ್ದ‌ ವೇಳೆ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದು ಕೊಂಡಿದ್ದ ಅನಂತಕುಮಾರ ಹೆಗಡೆ ಈಗ ಟಿಕೆಟ್ ಗಿಟ್ಟಿಸಲು ಕೇಂದ್ರದ ಹೈಕಮಾಂಡ ಗಮನಸೆಳೆಯಲು ಮತ್ತೊಮ್ಮೆ ಸಂವಿಧಾನದ ವಿಷಯ ಪ್ರಸ್ತಾಪಿಸಿ, 400 ಸೀಟ್ ಬಂದರೆ ಸಂವಿಧಾನ ಬದಲಿಸಲು ಸುಲಭ ಎಂಬ ಹಿಡಿನ್ ಅಜೆಂಡಾವನ್ನು ಬಹಿರಂಗ ಪಡಿಸಿದ್ದರು. ಸಿದ್ದಾಪುರ ಹಲಗೇರಿಯಲ್ಲಿ ಸಂವಿಧಾನ ಬದಲಿಸುವ ಹೇಳಿಕೆಯನ್ನು ಅನಂತಕುಮಾರ ಹೇಳಿದ್ದರು. ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಇಡೀ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಅನಂತಕುಮಾರ ಹಾಗೂ ಬಿಜೆಪಿ ವಿರುದ್ದ ತಿರುಗಿ ಬಿದ್ದಿತ್ತು. ವ್ಯಾಪಕ ವಿರೋಧ ಬರುತ್ತಿದ್ದಂತೆ ಬಿಜೆಪಿ ಅನಂತಕುಮಾರ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದ್ದಾರೆ.

ಇದನ್ನೂ ಓದಿ

ಇನ್ನೂ ಸಿದ್ದಾಪುರ ತಾಲೂಕಿನ ಹೊಸ್ತೋಟದ (ನಾಗರಕಟ್ಟೆ) ಗೋಪಾಲ ಎಂ. ಭಟ್ ಅವರನ್ನು ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿಸಲು ಬಿಜೆಪಿ ಹೈಕಮಾಂಡ ಚಿಂತನೆ ನಡೆಸಿದೆ ಎನ್ನಲಾಗಿದೆ ಪರಿವಾರದ ವರಿಷ್ಠರಿಗೆ ಅತ್ಯಂತ ಆಪ್ತರು ಮತ್ತು ವಿಶ್ವ ಹಿಂದೂ ಪರಿಷತ್ ಪ್ರಮುಖರು ಆಗಿರುವ ಗೋಪಾಲ ಜೀ ಅವರನ್ನು ಆಯೋಧ್ಯೆಯ ರಾಮ ಮಂದಿರದ ಉಸ್ತುವಾರಿಯನ್ನಾಗಿ ಸಹ ನೇಮಿಸಲಾಗಿತ್ತು.ಅವರು ಹಲವಾರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ಸಂಘಟನೆಯಲ್ಲೂ ಚತುರ ಎನಿಸಿಕೊಂಡಿದ್ದಾರೆ.

ಗೋಪಾಲ್ ಜೀ ಸಂಘಟನೆಯ ಕೆಲಸದಲ್ಲಿ ಅತ್ಯಂತ ಸಮರ್ಥರು. ಇದರಿಂದ ಅವರು ಸಂಸದರಾದರೆ ರಾಜ್ಯದಲ್ಲಿ ಪಕ್ಷದ ಬಲವೃದ್ಧಿಗೆ ಅವಕಾಶ ದೊರೆತ ಹಾಗಾಗುತ್ತದೆ ಎಂಬುದು ಬಿಜೆಪಿಗರ ಅಭಿಪ್ರಾಯ. ಆದರೆ ಗೋಪಾಲ್ ಜೀ ಅವರು ರಾಜಕೀಯಕ್ಕೆ ಬರಲು ಉತ್ಸುಕರಾಗಿದ್ದಾರೆಯೇ ಉತ್ತರಕನ್ನಡ ಅಥವಾ ರಾಜ್ಯದಲ್ಲಿ ಬೇರೆ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸಮ್ಮತಿಸಿದ್ದಾರೆಯೇ ಎಂಬುದೂ ಸಹ ಇನ್ನೂ ಸ್ಪಷ್ಟ ಆಗಬೇಕಿದೆ.

ಆದರೆ ಇದೀಗ ಹಾಲಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ವಿಚಾರವಾಗಿ ಮಾತನಾಡಿರುವು ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೂ ತಲೆನೋವಾಗಿದ್ದು, ಹೀಗಾಗಿಯೇ ರಾಜ್ಯ ಬಿಜೆಪಿ ಈಗಾಗಲೇ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಮೂಲಕ ಅನಂತಕುಮಾರ ಅವರನ್ನ ಬಿಜೆಪಿ ದೂರ ಇಟ್ಟಿರುವಂತೆ ಕಂಡುಬರುತ್ತಿದೆ.