suddibindu.in
ಬೆಂಗಳೂರು : ಮಾರ್ಚ್ ಒಂದರಂದು ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬದ ಬ್ಲಾಸ್ಟ್ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮೂಲಕ ಸಂಚಾರ ಮಾಡಿದ್ದಾನೆ ಎನ್ನಲಾಗುತ್ತಿದೆ.
ಶಂಕಿತ ಉಗ್ರ ಬೆಂಗಳೂರಿನ (Bengaluru) ಸುಜಾತ ಸರ್ಕಲ್ನಲ್ಲಿ ಬಸ್ ಹತ್ತಿ ತುಮಕೂರಿನಲ್ಲಿ (Tumakauru) ಇಳಿದಿದ್ದಾನೆ. ತುಮಕೂರಿನಿಂದ ಬಳ್ಳಾರಿಗೆ (Ballari) ಬಸ್ನಲ್ಲಿ ಬಂದು ನಂತರ ಮಂತ್ರಾಲಯ- ಗೋಕರ್ಣ ಬಸ್ ನಲಿ ಭಟ್ಕಳದ ಕಡೆ (Bhatkal) ತೆರಳಿದ್ದಾನೆ ಎನ್ನುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
- ಅನ್ನ ಗಂಟಲಿಗೆ ಸಿಲುಕಿ ಯುವಕ ಸಾವು : ಕಾರವಾರದಲ್ಲಿ ನಡೆದ ಘಟನೆ
- ಉತ್ತರ ಕನ್ನಡದಲ್ಲಿ ಯೋಜನೆಗಳಿಗೆ ವಿರೋಧ ಮಾಡುವ ಡೊಂಗಿ ಹೋರಾಟಗಾರರು ಆಸ್ಪತ್ರೆಗಾಗಿ ಯಾಕೆ ಹೋರಾಡುತ್ತಿಲ್ಲ.?
- Fish market/ಮೀನು ಮಾರುಕಟ್ಟೆ ಸ್ಥಳಾಂತರವಿಲ್ಲ : ಸಚಿವ ಮಂಕಾಳ್ ವೈದ್ಯ
ಪ್ರಕರಣಕ್ಕ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಬಳ್ಳಾರಿ ಬಸ್ ನಿಲ್ದಾಣದಲ್ಲಿ ಕಳೆದ ರಾತ್ರಿಯಿಂದ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.ಬೆಂಗಳೂರಿಂದ ಎರಡು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.ಇನ್ನೂ ಶಂಕಿತ ಉಗ್ರ ಹೂಡಿಯಲ್ಲಿ ಟೋಪಿ ಹಾಗೂ ಬಟ್ಟೆ ಬದಲಿಸಿಕೊಂಡು ಬಸ್ನಲ್ಲಿ ಪ್ರಯಾಣಿದ್ದಾನೆ. ಈಗಾಲೇ ತನಿಖಾ ತಂಡ ಆರೋಪಿ ಬಿಟ್ಟುಹೋಗಿರುವ ಟೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.