ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಓಬಿಸಿಗೆ ಸೇರಿದವರಲ್ಲ ಎನ್ನುವ ರಾಹುಲ್ ಗಾಂಧಿ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಇದರ ಬೆನ್ನಲೆ ರಾಜ್ಯದ ಖಾಸಗಿ ವಾಹಿನಿಯೊಂದು ನಡೆಸಿದ ಡಿಬೇಟ್ ನಲ್ಲಿ ದಲಿತ ನಾಯಕರು ಪ್ರತಿನಿಧಿಸುವದರಿಂದ ದಲಿತರ ಉದ್ದಾರವಾಗಿದೆಯಾ ? ಹನುಮ್ಕನವರ್ ಪ್ರಶ್ನೆಗೆ ಬೆವರಿಳಿಸಿದ ರಾಜ್ಯ ಅತಿ ಹಿಂದುಳಿದ ವರ್ಗಗಳ ಸಂಯೋಜಕ ಓಬಿಸಿ ಯುವ ಮುಖಂಡ ಜಿಲ್ಲೆಯ ಲೋಹಿತ್ ನಾಯ್ಕ. ತಕ್ಕ ಉತ್ತರ ನೀಡುವ ಮೂಲಕ ಹನುಮಕ್ಕನವರ್ ಬಾಯಿ ಮುಚ್ಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶ ಪ್ರಧಾನಿಯಾಗಲು ತಾನೊಬ್ಬ ಓಬಿಸಿ ಎಂದು ಹೇಳಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿಕೆಗೆ ಸಂಬಂಧಿಸಿ ದೇಶಾದ್ಯಂತ ವ್ಯಾಪಕ ಚರ್ಚೆಗಳು ಆರಂಭವಾಗಿದೆ. ಈ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಡಿಬೇಟ್ ಆರಂಭಿದೆ. ಈ ವಿಚಾರವಾಗಿ ಕರ್ನಾಟಕ ಖಾಸಗಿ ಮಾಧ್ಯಮವೊಂದು ಡಿಬೇಟ್ ನಡೆಸುವ ಸಂದರ್ಭದಲ್ಲಿ ದಲಿತ ನಾಯಕರು ಪ್ರತಿನಿಧಿಸುವದರಿಂದ ದಲಿತರ ಉದ್ದಾರವಾಗಿದೆಯಾ ? ಎನ್ನುವ ಬಗ್ಗೆ ಹನುಮಕ್ಕನವರ್ ಪ್ರಶ್ನೆ ಮಾಡಿದ್ದಾರೆ.
ಅವರ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಯುವ ಮುಖಂಡ ಲೋಹಿತ್ ನಾಯ್ಕ ಅವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಬ್ಬರು ದಲಿತರ ಪರ ದ್ವನಿ ಎತ್ತಿದ ಕಾರಣಕ್ಕೆ ಇಂದು ದಲಿತ ಸಮುದಾಯ ರಾಜಕೀಯ ಮತ್ತು ಶೈಕ್ಷಣಿಕ ಪ್ರಾತಿನಿದ್ಯ ಪಡೆದಿದೆ. ಆ ವರ್ಗದಲ್ಲಿ ಹುಟ್ಟಿದ ನಾಯಕರಿಗೆ ಮಾತ್ರ ಅವರ ನೋವು – ನಲಿವುಗಳ ಬಗ್ಗೆ ಅರಿವಿರುತ್ತದೆ. ಜಾತಿ ವ್ಯವಸ್ಥೆ ಈ ದೇಶ ವಾಸ್ತವ ಆ ವ್ಯವಸ್ತೆಯನ್ನು ಜಾತಿಯನ್ನೇ ಬಳಸಿ ಸರಿಮಾಡಬೇಕು. ಮೇಲ್ಜಾತಿಗಳು
ತಳ ಸಮುದಾಯಗಳಿಗೆ ನ್ಯಾಯ ಕೊಡಬಲ್ಲ ಕಾಂತರಾಜ್ ವರದಿಯನ್ನು ಒಪ್ಪುತ್ತಿಲ್ಲ. ಮೇಲ್ಜಾತಿಗಳು ಪ್ರಬಾವ ಬಿರಿ ವರದಿಯೇ ಅವೈಜ್ಞಾನಿಕ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ವರದಿ ಬಹಿರಂಗ ಗೊಳ್ಳದೆ ಪೂರ್ವಾಗ್ರಹ ಪೀಡಿತರಂತೆ ಆಡುತ್ತಿದ್ದಾರೆ.
ಇಷ್ಟೆಲ್ಲ ಜಾತಿಯ ಕಾರಣಕ್ಕೆ ನಡೆಯುತ್ತಿದ್ದರೂ ತಾವು ಜಾತಿ ಎಲ್ಲಿದೆ ? ಯಾವ ಜಾತಿ ಎಂದು ಕೇಳುವುದು ಹಾಸ್ಯಾಸ್ಪದ ಎಂದು ಹಿಂದುಳಿದ ಸಮಾಜಗಳ ಪರ ವಾದ ಲೋಹಿತ್ ನಾಯ್ಕ ಅವರ ವಾದ ಓಬಿಸಿ ಮತ್ತು ದಲಿತ ಸಮುದಾಯಗಳಲ್ಲಿ ಗಂಭೀರವಾದ ಚರ್ಚೆ ಹುಟ್ಟುಹಾಕಿದೆ. ಜೊತೆಗೆ ಡಿಬೇಟ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು.
ಏಕ ಪಕ್ಷೀಯ ನಿಲುವುಗಳ ಮೂಲಕ ಅನೇಕರ ಬಾಯಿ ಮುಚ್ಚಿಸುವಲ್ಲಿ ಪ್ರಖ್ಯಾತರಾಗಿರುವ ವಾಹಿನಿಯ ನಿರೂಪಕನಿಗೇ ತಕ್ಕ ಉತ್ತರಕೊಟ್ಟ ಹಿಂದೂಳಿದ ವರ್ಗದ ಯುವ ಮುಖಂಡ ಲೋಹಿತ್ ನಾಯ್ಕರ ಬಗ್ಗೆ ಮೆಚ್ಚುಗೆಯ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ….