ಸುದ್ದಿಬಿಂದು ಬ್ಯೂರೋ
ಶಿರಸಿ : ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅನಂತಕುಮಾರ ಹೆಗಡೆ ಈ ಭಾರಿ ಸ್ಪರ್ಧಿಸಲ್ಲ ಎನ್ನುವ ಉಹಾಪೋಗಳಿಗೆ ತೆರೆ ಬಿದ್ದಂತಾಗಿಗೆ, ಕಾರ್ಯಕರ್ತರ ಒತ್ತಡದಿಂದ ಸ್ಪರ್ಧೆ ಮಾಡಲು ಮನಸ್ಸು ಮಾಡಿರುವುದಾಗಿ ಸಂಸದ ಅನಂತರಕುಮಾರ ಹೇಳಿಕೆ ನೀಡಿದ್ದಾರೆ..

ಈ ಬಗ್ಗೆ ಶಿರಸಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಅನಂತಕುಮಾರ ಹೆಗಡೆ ವಯುಕ್ತಿಕ ಕಾರಣದಿಂದ ರಾಜಕೀಯ ದಿಂದ ದೂರವಿದ್ದೆ,ಚುನಾವಣೆ ರಾಜಕಾರಣ ,ಪಕ್ಷದ ರಾಜಕಾರಣದಿಂದ ಆರೋಗ್ಯದ ಸಮಸ್ಯೆ ಯಿಂದಾಗಿ ದೂರವಿದ್ದೆ ಅಭಿಮಾನಿಗಳು ಚುನಾವಣೆಗೆ ನಿಲ್ಲಬೇಕು ಎಂದು ಕಾರ್ಯಕರ್ತರಿಂದ ಬೇಡಿಕೆ ಬರುತ್ತಿದೆ ಒತ್ತಡ ಬರುತ್ತಿದೆ,‌

ರಾಜಕಾರಣ ಬೇಡ ಎಂದು ದೂರವಿದ್ದೆ ಎಂದಿರುವ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾರ್ಯಕರ್ತರು ಒತ್ತಾಯ ಮಾಡಿದಾಗ ತಿರಸ್ಕರಿಸುವುದು ಮೂರ್ಖತನ ವಾಗುತ್ತದೆ. ಹೀಗಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ..ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ,ಅಲ್ಪ ಸಂಖ್ಯಾತರ ಓಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ..ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ,ಕಾಂಗ್ರೆಸ್ ನವರು ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತಿದ್ದಾರೆ, ಎಂದರು.