ಸುದ್ದಿಬಿಂದು ಬ್ಯೂರೋ

ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ನವರಿಂದ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಆರೋಪಿಸಿದ್ದಾರೆ.

ಟೋಲ್ ಗೇಟ್ ಪಕ್ಕದಲ್ಲಿ ಒಂದೇರಡು ಕಿಲೋಮಿಟರ ಆಸುಪಾಸಿನಲ್ಲಿರುವ ಸುವರ್ಣಗದ್ದೆ,ಹೊಳೆಗದ್ದೆ ಹಾಗೂ ಬೆತ್ತಗೇರಿ ಗ್ರಾಮಸ್ಥರ ಓಡಾಟಕ್ಕೆ ಟೋಲ್ ಪಕ್ಕದಲ್ಲಿ ಸರ್ವಿಸ್ ರಸ್ತೆ ಮಾಡಲಾಗಿತ್ತು. ಆದರೆ ಆ ಗ್ರಾಮಸ್ಥರು ಸರ್ವಿಸ್ ರಸ್ತೆಯಲ್ಲಿ ತಮ್ಮ ವಾಹನ ಸಂಚಾರ ಮಾಡಿದರೆ ಟೋಲ್ ವಸೂಲಿ ಮಾಡಲು ಆಗುತ್ತಿಲ್ಲ ಎಂದು ಟೋಲ್ ಸಿಬ್ಬಂದಿಗಳು ಆ ಸರ್ವಿಸ್ ರಸ್ತೆಯನ್ನೆ ಬಂದ್ ಮಾಡಿ. ಸ್ಥಳಿಯ ಗ್ರಾಮಸ್ಥರಿಗೆ ಐಆರ್ ಬಿ ಕಂಪನಿಯವರು ಕಿರುಕುಳ ನೀಡುತ್ತಿದ್ದಾರೆ. ಕೆಎ 47 ನೊಂದಣಿ ಹೊಂದಿರುವ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗಿತ್ತುಮ ಆದರೆ ಅದನ್ನು ಮಾಡುತ್ತಿಲ್ಲ. ಟೋಲ್ ಅಕ್ಕ-ಪಕ್ಕದಲ್ಲಿ ಇರುವ ಗ್ರಾಮಸ್ಥರ ವಾಹನಕ್ಕೂ ಟೋಲ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ.‌ ಐಆರ್ ಬಿ ಕಂಪನಿಯಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆಂದು ಭಾಸ್ಕರ್ ಪಟಗಾರ ಆರೋಪಿಸಿದ್ದಾರೆ.

ಸರ್ವಿಸ್ ರಸ್ತೆಯಲ್ಲಿ ಮಣ್ಣು ಹಾಕಿ ಸ್ಥಳೀಯರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಕುಮಟಾದ ಉಪವಿಭಾಗದ ಅಧಿಕಾರಿಗಳಿಗೆ ಕರೆ ಮಾಡಿರುವ ಭಾಸ್ಕರ್ ಪಟಗಾರ ತಕ್ಷಣ ಸರ್ವಿಸ್ ರಸ್ತೆಯಲ್ಲಿ ಐಆರ್ ಬಿ ಅವರು ಹಾಕಿರುವ ಮಣ್ಣು ತೆರವು ಮಾಡುವ ಮೂಲಕ ಅಲ್ಲಿನ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಹೆದ್ದಾರಿ ಕಾಮಗಾರಿ ಪೂರ್ಣವಾಗದೆ ಇದ್ದರೂ ಸಹ ಶುಲ್ಕ ವಸೂಲಿ ಮಾಡುವುದು ತಪ್ಪು.ಹತ್ತು ವರ್ಷವಾದರೂ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.

ಅದರಲ್ಲೂ ಮಳೆಗಾಲ ಮುಗಿದು ಮೂರು ತಿಂಗಳಾದ್ದರೂ ಉಳಿದ ಕಾಮಗಾರಿಯನ್ನ ಇನ್ನೂ ಪ್ರಾರಂಭಿಸಿಲ್ಲ.ಇವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಲೆ ಇದೆ.ಈ ಬಗ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಐಆರ್ ಬಿ ಕಂಪನಿಯ ಮುಖ್ಯಸ್ಥ ಜೊತೆ ಸಭೆ ನಡೆಸಿ ಐಆರ್ ಬಿ ಮುಖ್ಯಸ್ಥರಿಗೆ ಎಚ್ಚರಿಸಬೇಕು ಎಂದು ಭಾಸ್ಕರ್ ‌ಪಟಗಾರ ಒತ್ತಾಯಿಸಿದ್ದು,ಸಮಸ್ಯೆ ಬಗೆಹರಿಯದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.