ಸುದ್ದಿಬಿಂದು ಬ್ಯೂರೋ
Gokarna:ಗೋಕರ್ಣ : ಉತ್ತರಕನ್ನಡ(Utarakannda) ಜಿಲ್ಲೆಯ ಗೋಕರ್ಣದ ಕುಡ್ಲೆ ಬೀಚ್ನಲ್ಲಿ(Kudle Beach) ಈಜಲು ಹೋಗಿ ಮುಳುಗಡೆಯಾಗಿದ್ದ ವಿದೇಶಿ ಪ್ರವಾಸಿಗನಿಗೆ(Foreign tourist)ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಖಜಕಿಸ್ತಾನದ ತಲಗಟ್ (60)ಮುಳುಗಡೆಯಾಗಿದ್ದ ಪ್ರವಾಸಿಗನಾಗಿದ್ದಾನೆ.ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು.ಸಮುದ್ರದಲ್ಲಿ ಈಜಲು ಇಳಿದಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬರಲಾಗದೆ ಮುಳುಗುವ ಸ್ಥಿತಿಯಲ್ಲಿದ್ದರು.ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.ಅಲ್ಲೇ ಸಮೀಪ ಇದ್ದ ಲೈಫ್ಗಾರ್ಡ್(Lifeguard)ಸಿಬ್ಬಂದಿ ತಕ್ಷಣ ಸಮುದ್ರಕ್ಕೆ ಜಿಗಿದು ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
ಕರ್ತವ್ಯನಿರತ ಲೈಫ್ಗಾರ್ಡ್ ಸಿಬ್ಬಂದಿಗಳಾದ ನಾಗೇಂದ್ರ ಎಸ್ ಕುರ್ಲೆ,ಪ್ರವಾಸಿಮಿತ್ರ ರಘುವೀರ ಎನ್ ನಾಯ್ಕ್ ರಕ್ಷಣೆ ಮಾಡಿದವರಾಗಿದ್ದು ಇವರಿಗೆ ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿಗಳಾದ ರೋಹನ್, ಜೆಸ್ಕಿ ಡ್ರೈವರ್ ಪ್ರಕಾಶ್ ಸಹಾಯ ಮಾಡಿದ್ದಾರೆ.