ಸುದ್ದಿಬಿಂದು ಬ್ಯೂರೋ
ಕಾರವಾರ : ಕುಮಟ ಶಿರಸಿ ರಸ್ತೆಯನ್ನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇದು ಸ್ವಾಗತರ್ಹ.ಅಭಿವೃದ್ಧಿಗೆ ನಾವು ವಿರೋಧ ಮಾಡುವುದಿಲ್ಲ.ಆದರೆ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಗುತ್ತಿಗೆ ಪಡೆದ ಕಂಪನಿ ಈ ರಸ್ತೆಯನ್ನ ಸಂಪೂರ್ಣವಾಗಿ ಬಂದ್ ಮಾಡಲು ಹೋರಟಿರುವುದು ಸರಿಯಲ್ಲ. ಕಾಮಗಾರಿ ಈ ರಸ್ತೆಯನ್ನ ಏಳು ತಿಂಗಳು ಬಂದ್ ಮಾಡಲು ಮುಂದಾಗಿದೆ. ಆದರೆ ಇವರುಗಳು ಬೇರೆ ಬೇರೆ ಕಾರಣ ನೀಡಿ ಮೂರು ವರ್ಷ ಬಂದ್ ಮಾಡಲಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಹೇಳಿದ್ದಾರೆ.
ಅವರು ಇಂದು ಕಾರವಾರದ ಪತ್ರಿಕಾಭವನಲ್ಲಿ ಕರೆದ ಸುದ್ದಗೋಷ್ಠಿಯಲ್ಲಿ ಮಾತನಾಡಿ. ಕುಮಟಾ ಶಿರಸಿ 66ಕಿಲೋಮೀಟರ ಇದ್ದು ಈ ಭಾಗದಲ್ಲಿ ಅನೇಕ ಹಳ್ಳಿಗಳಿದ್ದು, ಹೆಚ್ಚಾಗಿ ಕೃಷಿಕರೆ ಆಗಿದ್ದು, ಹೆದ್ದಾರಿ ಸಂಪೂರ್ಣವಾಗಿ ಬಂದ್ ಆದರೆ ಆ ಭಾಗದ ಜನರಿಗೆ ಹೆಚ್ಚನ ಸಮಸ್ಯೆ ಆಗಲಿದೆ. ಈ ಹಿಂದೆ ಏನು ಕಾಮಗಾರಿನ್ನ ಮಾಡುವಾಗ ಒಂದು ಕಡೆಯಲ್ಲ ಸಂಚಾರಕ್ಕೆ ಅವಕಾಶ ನೀಡಿ ಕಾಮಗಾರಿಗಳನ್ನ ಮಾಡಿದ್ದರೋ ಹಾಗೆ ಮಾಡಬೇಕಿದೆ.
ಒಂದುವರೆ ವರ್ಷದಲ್ಲಿ ಮುಗಿಸಬೇಕಾಗಿದ್ದ ಕಾಮಗಾರಿಯನ್ನ ಆಗಾಗಲೇ ಮೂರು ವರ್ಷ ಕಳೆದರು ಮುಗಿಸಲು ಸಾಧ್ಯವಾಗಿಲ್ಲ. ಇದುವರಗೆ ಅರ್ಧ ಕಾಮಗಾರಿ ಮುಗಿದಿದ್ದು, ಇನ್ನೂಳಿದ ಅರ್ಧ ಕಾಮಗಾರಿಯನ್ನ ಏಳು ತಿಂಗಳ ಒಳಗಾಗಿ ಮುಗಿಸುವುದಾಗಿ ಹೇಳುತ್ತಿದ್ದಾರೆ ಸುಮ್ಮನೆ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವುದನ್ನ ಬಿಟ್ಟು ಜನರಿಗೆ ತೊಂದರೆ ಆಗದೆ ಇರುವ ಹಾಗೆ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕಿದೆ..
ಶಿರಸಿ-ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರಿದ್ದಾರೆ. ರಸ್ತೆ ಬಂದ್ ಮಾಡುವುದರಿಂದ ಅಲ್ಲಿನ ರೈತರು ತಾವು ಬೆಳೆದ ಬೆಳೆಗಳನ್ನ ಹೇಗೆ ಸಾಗಾಟ ಮಾಡಬೇಕು. ರಸ್ತೆ ಬಂದ್ ಆಗುವುದರೊಂದಿ ರೈತರಿಗೆ ಭಾರೀ ಸಮಸ್ಯೆಗಳು ಆಗುತ್ತಿದೆ.ನ.1ರಿಂದ ರಸ್ತೆ ಬಂದ್ ಮಾಡಿದರೆ ಆರು ತಿಂಗಳಲ್ಲಿ ಪೂರ್ಣಗೊಳಿಸಲು ಆಗುವುದಿಲ್ಲ ಮೂರು ವರ್ಷ ಬಂದ್ ಆಗೇ ಆಗುತ್ತದೆ.
ಸ್ಥಳೀಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ. ಏಕಾಏಕಿ ಬಂದ್ ಮಾಡಿದರೆ ಸಮಸ್ಯೆ ಆಗಲಿದೆ.
ಪ್ರವಾಸೋದ್ಯಮಕ್ಕೂ ಕೂಡ ಇದರಿಂದ ತೊಂದರೆ ಆಗಲಿದೆ. ಸಾವಿರಾರು ಪ್ರವಾಸಿಗರು ಇದೆ ಮಾರ್ಗವಾಗಿ ಬೇರೆ ಬೇರೆ ಜಿಲ್ಲೆಗಳಿಂದ ನಮ್ಮ ಕರಾವಳಿ ಭಾಗಗಳಿಗೆ ಪ್ರವಾಸಕ್ಕೆ ಬರುತ್ತಾರೆ.ಇದರಿಂದ ಪ್ರವಾಸೋದ್ಯಮಕ್ಕೂ ಹೊಡೆತವಾಗಲಿದೆ.
ರಸ್ತೆ ಬಂದ್ ಮಾಡುವ ಬದಲು ಪರ್ಯಾಯ ರಸ್ತೆ ಸರಿಪಡಿಸಿಕೊಳ್ಳಿ. ಅದನ್ನ ಮೊದಲು ನಿರ್ವಹಣೆ ಮಾಡಿ. ಏಕಾಏಕಿ ಬದಲಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕೊಟ್ಟಲ್ಲಿ ಅಲ್ಲಾಗುವ ಅವಘಡಗಳಿಗೆ ಜಿಲ್ಲಾಡಳಿತ, ಗುತ್ತಿಗೆ ಕಂಪನಿ ಹೊಣೆಯಾಗಬೇಕಾಗುತ್ತದೆ. ರಸ್ತೆ ಮೊದಲು ಪೂರ್ಣ ಮಾಡಿಕೊಂಡು ನಂತರ ಸಿಡಿ ಮಾಡಲು ರಸ್ತೆ ಬಂದ್ ಮಾಡಿಕೊಳ್ಳಿ ಎಂದು ಭಾಸ್ಕರ್ ಪಟಗಾರ ಹೇಳಿದ್ದಾರೆ.
ಕರವೇ ಜಿಲ್ಲಾ ಉಪಾಧ್ಯಕ್ಷ ಅರುಣ್ ಹರಕಡೆ, ಕಾರವಾರ ಅಧ್ಯಕ್ಷ ನರೇಂದ್ರ ತಳೇಕರ್, ಕುಮಟಾ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಮಂಜುನಾಥ ನಾಯ್ಕ, ಜಿಲ್ಲಾ ಪ್ರಧಾಕಾರ್ಯದರ್ಶಿ ಗಣಪತಿ ನಾಯ್ಕ ಕಾರವಾರದ ರಾಜಾ ನಾಯ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.