ಸುದ್ದಿಬಿಂದು ನ್ಯೂಸ್ ಡೆಸ್ಕ್
Gokarna: ಗೋಕರ್ಣ: ಸಮುದ್ರದಲ್ಲಿ ಈಜುತ್ತಿರುವಾಗ ಅಲೆಗೆ ಸಿಲುಕಿ ಮುಳುಗುತ್ತಿದ್ದ ಬಳ್ಳಾರಿ(Bellary)ಮೂಲದ ಬಾಲಕನಿಗೆ ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ (Uttarkannada)ಜಿಲ್ಲೆಯ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಅಂಜನಪ್ಪನಗರದ ಕುಟುಂಬದವರು ಬಳ್ಳಾರಿಯಿಂದ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ರು. ಈ ವೇಳೆ ಅಲ್ಲಿನ ಮುಖ್ಯ ಕಡಲ ತೀರದಲ್ಲಿ ಈ ಕುಟುಂಬಸ್ಥರು ಈಜಲು ನೀರಿಗೆ ಇಳಿದಿದ್ರು. ಈ ವೇಳೆ ರಕ್ಕಸದ ಅಲೆಗಳು ಅಪ್ಪಳಿಸಿದ್ದು, ಇದರಿಂದಾಗಿ ಹನ್ನೊಂದು ವರ್ಷದ ಸಮೀರ್ ಎಂಬಾತ ಸಮುದ್ರದ ರಕ್ಕಸದ ಅಲೆಯಲ್ಲಿ ಸಿಲುಕಿ ಮುಳುಗುತ್ತಿದ್ದ,
ಇದನ್ನ ನೋಡಿದ ಕರ್ತವ್ಯದಲ್ಲಿದ್ದ ಅಲ್ಲಿನ ಲೈಪ್ ಗಾರ್ಡ್(Life Guard) ಸಿಬ್ಬಂದಿ ಶಿವಪ್ರಸಾದ್ ಅಂಬಿಗ ಎಂಬುವರರು ತಕ್ಷಣ ಸಮುದ್ರದಲ್ಲಿ ಈಜಿ ಮುಳುಗಡೆಯಾಗುತ್ತಿದ್ದ ಬಾಲಕನನ್ನ ರಕ್ಷಣೆ ಮಾಡಿ ಆತನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಅದೆಷ್ಟೆ ಎಚ್ಚರಿಕೆ ನೀಡಿದ್ರೂ ಕೂಡ ಪದೆ ಪದೆ ನೀರಿಗೆ ಇಳಿದು ಅಪಾಯ ಮೈಮೇಲೆ ಎಳೆದುಕೊಳ್ಳುವಂತಾಗಿದೆ.