ಸುದ್ದಿಬಿಂದು ಬ್ಯೂರೋ
ಕಾರವಾರ : ನಗರದ ಲಂಡನ್ ಬ್ರಿಡ್ಜ್ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿಯ ಅವಳಿ ಸುರಂಗ ಮಾರ್ಗವನ್ನ ಬಂದ್ ಮಾಡಲು ನಾನು ಹೇಳಿಲ್ಲ. ಜನರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲು ಹೇಳಿದ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಮತ್ತೊಮ್ಮೆ ತಮ್ಮ ಹೇಳಿಕೆಯನ್ನ ಸ್ಪಷ್ಟ ಪಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವಳಿ ಸುರಂಗದಲ್ಲಿ ಮಳೆಗಾಲದಲ್ಲಿ ಸೋರಿಕೆ ಆಗುತ್ತಿದೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗೆ ಸಂಬಂಧಿಸಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಿ ಅಂತಾ ಅಧಿಕಾರಿಗಳಿಗೆ ಹೇಳಿದ್ದೆ,
ಟನಲ್ ಬಗ್ಗೆ ಫಿಟ್ನೆಸ್ ಸರ್ಟಿಫಿಕೇಟ್ ಕೇಳಿದ್ದೆ, ಅವರ ಬಳಿ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಕಾರಣ ಟನಲ್ ಬಂದ್ ಮಾಡಿದ್ದಾರೆ. ಆದರೆ ಈಗ ಅದು ರಾಜಕೀಯಕ್ಕೆ ಎಡೆತ್ತಾಕಿಕೊಂಡಿದೆ. ಬೇರೆ ಏನು ಇಲ್ಲ.
ವಿಧಾನಪರಿಷತ್ ಸದಸ್ಯರಾಗಿರುವ ಗಣಪತಿ ಉಳ್ವೇಕರ್ ಅವರು ಟನಲ್ ಓಪನ್ ಮಾಡುವುದಾಗಿ ಹೇಳತ್ತಿದ್ದಾರೆ. ಅದಕ್ಕೆ ನನ್ನ ಸ್ವಾಗತ ಇದೆ. ಒಂದು ವೇಳೆ ನಾಳೆ ಯಾರಿಗೇನಾದ್ರೂ ಅನಾಹುತವಾದರೆ ಯಾರು ಹೊಣೆ ಎಂದು ಸಚಿವರ ಪ್ರಶ್ನೆ ಮಾಡಿದ್ದಾರೆ, ನನ್ನ ಉದ್ದೇಶ ಟನಲ್ ಬಂದ್ ಮಾಡಿಸುವುದಲ್ಲ. ಜನರ ಜೀವಕ್ಕೆ ಏನು ತೊಂದರೆ ಆಗದಿರಲಿ ಎನ್ನುವುದು ನನ್ನ ಉದ್ದೇಶವಾಗಿದೆ.
ಕಾರವಾರದ ಮಾಜಾಳಿಯಿಂದ ಭಟ್ಕಳದ ಶಿರೂರು ವರಗೆ ಏನು ಚತುಷ್ಪಥ ಹೆದ್ದಾರಿ ಕಾಮಗಾರಿ ಐದು ವರ್ಷದಲ್ಲಿ ಮುಗಿಯಬೇಕಿತ್ತು ಅದನ್ನ ಇದುವರೆಗೆ ಪೂರ್ಣ ಮಾಡಿಲ್ಲ. ಅನೇಕ ಕಡೆಯಲ್ಲಿ ಗುಡ್ಡ ಕುಸಿಯುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಆದರೂ ಇನ್ನೂ ಹೆದ್ದಾರಿ ಸರಿಯಾಗದೆ ಟೋಲ್ ವಸೂಲಿ ಮಾಡುತ್ತಿದ್ದಾರೆ.ಈ ಬಗ್ಗೆ ಜಿಲ್ಲೆಯಲ್ಲಿ ಯಾರು ಮಾತನಾಡುತ್ತಿಲ್ಲ.ಇದರ ಅರ್ಥ ಏನು ಅಂತಾ ಗೊತ್ತಾಗುತ್ತಿಲ್ಲ.