ಸುದ್ದಿಬಿಂದು ಬ್ಯೂರೋ
ಕಾರವಾರ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಕಾಳಿಂಗ ಸರ್ಪ (King Cobra)ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ‌ ಕಾರವಾರದ ಶೇಜವಾಡ ಬಳಿ ನಡೆದಿದೆ.

ಶೇಜವಾಡದ ಮಂಜುನಾಥ ನಾಯ್ಕ ಎಂಬುವವರು ತಮ್ಮ‌ ಮನೆಯ ಅಂಗಳಲ್ಲಿ ಬೈಕ್‌‌ ನಿಲ್ಲಿಸಿಟ್ಟಿದ್ದರು.ಈ ವೇಳೆ ಬೈಕ್ ನ ಹಿಂಬದಿಯ ಚೈನ್ ಪಾಕೆಟ್‌ ಬಳಿ ಕಾಳಿಂಗ ಸರ್ಪ ಬಚ್ಚಿಟ್ಟುಕೊಂಡಿತ್ತು.

ತಕ್ಷಣ ಉರಗ ರಕ್ಷಕ ಅನಿಲ್ ಪೂಜಾರಿ ಎಂಬುವವರು ಸ್ಥಳಕ್ಕೆ‌ ಆಗಮಿಸಿ ಬೈಕ್ ಒಳಗೆ ಇದ್ದ ಕಾಳಿಂಗ ಸರ್ಪವನ್ನ ಹಿಡಿದು ರಕ್ಷಿತ ಪ್ರದೇಶಕ್ಕೆ ಕೊಂಡೊಯ್ದು ಕಾಳಿಂಗ ಸರ್ಪ ಬಿಡಲಾಗಿದೆ. ಇದರಿಂದಾಗಿ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.