ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ಕಾಂಗ್ರೆಸ್ ನಲ್ಲಿ ಕಗ್ಗಂಟಾಗಿರುವ ಮುಖ್ಯಮಂತ್ರಿ ಆಯ್ಕೆ ಮಧ್ಯೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ನೂತನ ಸಚಿವರ ಶಾರ್ಟ್ ಲಿಸ್ಟ್ ಸಿದ್ದ ಮಾಡಿಕೊಂಡಿದ್ದಾರೆ. ಅದರಲ್ಲಿ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಹೆಸರು ಕೂಡ ಇದೆ ಎನ್ನುವ ಬಗ್ಗೆ ಕಾಂಗ್ರೆಸ್ ಮೂಲದಿಂದ ತಿಳಿದು ಬಂದಿದೆ.
ಭೀಮಣ್ಣ ನಾಯ್ಕ ಅವರು ಹಿಂದಿನಿಂದಲ್ಲೂ ಪಕ್ಷ ಸಂಘಟನೆಯಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡು ಬಂದಿದ್ದು, ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಯನ್ನ ಅಚ್ಚಕಟ್ಟಾಗಿ ನಿವಾಯಿಸಿಕೊಂಡು ಬಂದಿದ್ದು, ಪಕ್ಷದ ನಾಯಕರ ಮೆಚ್ಚುಗೆಗೂ ಇದು ಕಾರಣವಾಗಿದೆ.ಕಳೆದ ಕೆಲ ಚುನಾವಣೆಯಲ್ಲಿ ಹಿನ್ನಡೆಯಾಗದರೂ ಸಹ ಭೀಮಣ್ಣ ನಾಯ್ಕ ಅವರು ಪಕ್ಷ ಸಂಘಟನೆಯಲ್ಲಿ ಹಿಂದೆ ಸರಿಯದೆ ಹೈಕಮಾಂಡ ಸೂಚನೆಯಂತೆ ನಡೆದುಕೊಂಡು ಬಂದಿದ್ದಾರೆ.

ಭೀಮಣ್ಣ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರೂ ಸಹ ಅವರ ಒಂದುವರೆ ಪಕ್ಷಕ್ಕಾಗಿ ಮಾಡಿರುವ ತ್ಯಾಗವನ್ನ ಮುಂದಿಟ್ಟುಕೊಂಡ ಪಕ್ಷದ ನಾಯಕರು ಭೀಮಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇವರ ಜೊತೆಯಲ್ಲಿ ಭಟ್ಕಳ ಶಾಸಕರಾಗಿರುವ ಮಂಕಾಳು ವೈದ್ಯ ಅವರ ಹೆಸರು ಕೇಳಿ ಬರುತ್ತಿದ್ದು, ಕರಾವಳಿ ಜಿಲ್ಲೆಯಲ್ಲಿ ಮಂಕಾಳು ವೈದ್ಯ ಒಬ್ಬರೆ ಮೀನಾಗಾರ ಸಮುದಾಯದಿಂದ ಆಯ್ಕೆಯಾಗಿದ್ದು,ಮೀನುಗಾರ ಸಮುದಾಯಕ್ಕೆ ಆದ್ಯತೆ ನೀಡಬೇಕು ಎನ್ನುವ ವಿಚಾರ ಸಹ ಚರ್ಚೆಯಲ್ಲಿದೆ ಎನ್ನಲಾಗುತ್ತಿದೆ.

ಇನ್ನೂ ಹಿರಿಯ ರಾಜಕಾರಣಿ ಆಗಿರುವ ಹಳಿಯಾಳ ಶಾಸಕ ಆರ್  ವಿ ದೇಶಪಾಂಡೆ ಅವರಿಗೆ ರಾಜ್ಯಸಚಿವ ಸಂಪುಟದಲ್ಲಿ ಉನ್ನತ ಹುದ್ದೆ ನೀಡುವ ಬಗ್ಗೆ ಸಹ ಚರ್ಚೆ ನಡೆದಿದ್ದು,ಉಪ ಮುಖ್ಯಮಂತ್ರಿ ಜೊತೆಗೆ ಅವರಿಗೆ ಕೈಗಾರಿಕೆ, ಇಲ್ಲವೆ ಪ್ರವಾಸೋದ್ಯಮ ಖಾತೆ ನೀಡುವ ಸಾಧ್ಯತೆ ಇದೆ..

ಸಂಭಾವ್ಯ ಸಚಿವರ ಪಟ್ಟಿ ಇಂತಿದೆ..

ಶಿರಸಿ – ಭೀಮಣ್ಣ ನಾಯ್ಕ, ಭಟ್ಕಳ -ಮಂಕಾಳು ವೈದ್ಯ
ಬೆಳಗಾವಿ – ಲಕ್ಷ್ಮಣ್ ಸವದಿ, ಲಕ್ಷ್ಮೀ ಹೇಬ್ಬಾಳ್ಕರ್, ಸತೀಶ್ ಜಾರಕಿಹೊಳಿ,ಬಾಗಲಕೋಟೆ – ಆರ್.ಬಿ.ತಿಮ್ಮಾಪುರ, ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್, ಕಲಬುರಗಿ – ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಶರಣ ಪ್ರಕಾಶ್ ಪಾಟೀಲ್, ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ, ಯಾದಗಿರಿ – ಶರಣಪ್ಪ ದರ್ಶನಾಪುರ್, ಬೀದರ್ – ರಹೀಮ್ ಖಾನ್, ಈಶ್ವರ್ ಖಂಡ್ರೆ, ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ, ಗದಗ – ಹೆಚ್.ಕೆ. ಪಾಟೀಲ್, ಧಾರವಾಡ – ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ/ಸಂತೋಷ್ ಲಾಡ್,ಹಾವೇರಿ – ರುದ್ರಪ್ಪ ಲಮಾಣಿ, ಬಳ್ಳಾರಿ – ತುಕಾರಾಮ್, ನಾಗೇಂದ್ರ, ಚಿತ್ರದುರ್ಗ – ರಘುಮೂರ್ತಿ, ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್ಎಸ್ ಮಲ್ಲಿಕಾರ್ಜುನ, ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್, ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ, ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ, ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ, ಕೋಲಾರ-  ರೂಪ ಶಶೀಧರ್/ ನಾರಾಯಣ ಸ್ವಾಮಿ, ಬೆಂಗಳೂರು- ಕೆಜೆ ಜಾರ್ಜ್/ ರಾಮಲಿಂಗಾ ರೆಡ್ಡಿ, ಎನ್.ಎ ಹ್ಯಾರಿಸ್, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್, ಮಂಡ್ಯ- ಎನ್ ಚೆಲುವರಾಯ ಸ್ವಾಮಿ, ಮಂಗಳೂರು- ಯುಟಿ ಖಾದರ್, ಮೈಸೂರು- ಎಚ್ ಸಿ. ಮಹದೇವಪ್ಪ/ ತನ್ವೀರ್ ಸೇಠ್, ಚಾಮರಾಜನಗರ- ಪುಟ್ಟರಂಗ ಶೆಟ್ಟಿ ,ಕೊಡಗು- ಎ ಎಸ್ ಪೊನ್ನಣ್ಣ (ವಿರಾಜಪೇಟೆ ಕ್ಷೇತ್ರದ ನೂತನ ಶಾಸಕ), ಬೆಂಗಳೂರು ಗ್ರಾಮಾಂತರ- ಕೆ ಎಚ್ ಮುನಿಯಪ್ಪ, ವಿಧಾನ