ದಾಂಡೇಲಿ : ಕರ್ನಾಟಕವನ್ನ ಸದೃಢಗೊಳಿಸಲು ಈ ಬಾರಿ ರಾಜ್ಯದಲ್ಲಿ ಬದಲಾವಣೆ ತನ್ನಿ,ಬಿಜೆಪಿಯ ಲೂಟಿ ತಡೆದು ನಿಮ್ಮ ಸಂಪತ್ತು ನಿಮ್ಮ ಪಾಲಿಗೆ ಸಿಗುವಂತಾಗಬೇಕು ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜನತೆಯಲ್ಲಿ ಕೇಳಿಕೊಂಡರು

ಅವರು ಇಂದು ಶನಿವಾರ ದಾಂಡೇಲಿಯ ಡಿಎಫ್ ಎ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ದಾಂಡೇಲಿ ಇದು ಮಿನಿ ಇಂಡಿಯಾ ಆಗಿರುವುದು ಖುಷಿಯಾಗಿದೆ. ಇಲ್ಲಿ ಎಲ್ಲಾ ಸಮುದಾಯದ ಜನರು ಒಗ್ಗಟ್ಟಾಗಿ ಬಾಳುತ್ತಿರುವುದು ಸಂತೋಷ ತಂದಿದೆ.ಇಂದಿನ ರಾಜಕೀಯ ದಾರಿ ತಪ್ಪಿಸುವ ರಾಜಕೀಯ, ಇದನ್ನ ಬಿಜೆಪಿಯವರು ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಯಾವ ವಿಷಯ ತರಬೇಕು ಎಂದು ಬಿಜೆಪಿ ಕಾಯುತ್ತಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ನಾನೇನು ಮಾಡಿಲ್ಲ. ಆದರೆ ಇಂದಿರಾ ಗಾಂಧಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಿರಿಯರು ಇಂದಿಗೂ ನನ್ನನ್ನು ಭೇಟಿಯಾದಾಗ ಇಂದಿರಾ ಗಾಂಧಿಯವರನ್ನ ನೆನೆಪು ಮಾಡಿಕೊಳ್ಳುತ್ತಾರೆ. ಯಾರಿಂದ ಬೆಲೆ ಏರಿಕೆ ಕಡಿಮೆಯಾಗಲಿದೆ. ಭೃಷ್ಟಾಚಾರ ಕಡಿಮೆಯಾಗುತ್ತದೆ. ಉದ್ಯೋಗ, ಭವಿಷ್ಯ ದೊರೆಯುತ್ತದೆ ಎಂಬುದನ್ನ ನಿರ್ಧರಿಸಿ. ನಾರಾಯಣ ಗುರು,ಬಸವಣ್ಣ ಹುಟ್ಟಿದ ನಾಡಿನ ಜನರು ಸತ್ಯದ ಮಾರ್ಗದಲ್ಲಿ
ಸಾಗಿ,ನೈಜತೆ ಅರಿತುಕೊಳ್ಳಿ ಎಂದರು.

ಜನರಿಗೆ ದಾರಿತಪ್ಪಿಸಿದ್ದಯ ಆಯತ್ತು, ಕೋಪ ಬರಿಸ್ಸಿದ್ದು ಆಯತ್ತು. ಬೆಲೆ ಏರಿಕೆ ಮಾಡಿಯೂ ಆಯತ್ತು. ನಿಮ್ಮನ್ನ ಸಂಘರ್ಷಕ್ಕೆ ಒಳಗಾಗಿಸಿ ಇನ್ನೊಬ್ಬರು ಲಾಭ ಪಡೆಯುತ್ತಾರೆ ಎಚ್ಚೆತ್ತುಕೊಳ್ಳಿ, ಬಿಜೆಪಿ ಸರಕಾರ ರಾಜ್ಯದಲ್ಲಿ ಮಹಿಳೆಯರಿಗಾಗಿ 24ಯೋಜನೆತ ಆಶ್ವಾಸನೆ ನೀಡಿ ಕೇವಲ 2 ಯೋಜನೆಯನ್ನ ಮಾತ್ರ ಜಾರಿ ಮಾಡಿದೆ.ಬಿಜೆಪಿಯವರು ಆಡಳಿತ ಚುಕ್ಕಾಣಿ ತಮ್ಮಗೆ ನೀಡಿ ಎಂದು ಹೇಳುತ್ತಿದ್ದಾರೆ. ಮೂರುವರೆ ವರ್ಷದಲ್ಲಿ ರಾಜ್ಯದಲ್ಲಿ ಯಾವ ಸರಕಾರ ಇತ್ರು ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಇಂದು ಪ್ರತಿಯೊಂದರ ಬೆಲೆ ಏರಿಕೆಯಾಗಿದೆ.ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ.ರೈತರು ಬೆಳೆದ ಬೆಳೆಗೂ ಸಹ ಜಿಎಸ್ ಟಿ ಕಾಟ,ರಾಜ್ಯದಲ್ಲಿ ಇಂದು 40%ಸರಕಾರ ಇದೆ. ಜನರನ್ನ ಲೂಟಿ ಮಾಡುತ್ತಿದ್ದಾರೆ. ಇದುವರೆಗೆ 1.5ಲಕ್ಷ ಕೋಟಿ ಹಣವನ್ನ ಬಿಜೆಪಿ ಸರಕಾರ ಜನರಿಂದ ಲೂಟಿ ಮಾಡಿದೆ. ಇವರು ಮಾಡಿರುವ ಲೂಟಿ ಹಣದಿಂದ ರಸ್ತೆ,ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ ನಿರ್ಮಾಣ ‌ಮಾಡಬಹುದಾಗಿತ್ತು ಎನ್ನುವ ಮೂಲಕ ತಮ್ಮ ಭಾಷಣದ್ದೂಕ್ಕೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.