ಸುದ್ದಿಬಿಂದು ಬ್ಯೂರೋ
ಹುಬ್ಬಳ್ಳಿ : ಮಾಜಿ ಸಿ ಎಂ ಜಗದೀಶ ಶೇಟ್ಟರ್ ಜೊತೆ ಬಿಜೆಪಿ ಕೇಂದ್ರ ನಾಯಕರು ನಡೆಸಿದ ಗೌಪ್ಯ ಮಾತುಕತ ವಿಫಲವಾಗಿದ್ದು, ಇದೀಗ ಶೇಟ್ಟರ್ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಇಂದು ಬೆಳಿಗ್ಗೆ ಯಿಂದ ರಾತ್ರಿ ತನಕ ಜಗದೀಶ ಶೇಟ್ಟರ್ ಮನವಲಿಸಲುವ ಬಗ್ಗೆ ಅವರ ಹುಬ್ಬಳ್ಳಿ ನಿವಾಸದಲ್ಲಿ ಪಕ್ಷದ ಅನೇಕ ಪ್ರಮುಖ ನಾಯಕರು ಸುದೀರ್ಘ ಕಾಲ ನಡೆಸಿದ ಮಾತುಕತೆ ನಡೆಸಿದ ವಿಫಲವಾಗಿದ್ದು, ಇದೀಗ ಜಗದೀಶ್ ಶೇಟ್ಟರ್ ಪಕ್ಣಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ನಾನು ಹಾಗೂ ಯಡಿಯೂರಪ್ಪ ಇಬ್ಬರೂ ಕಳೆದ 30 ವರ್ಷಗಳಿಂದ ಪಕ್ಷ ಸಂಘಟನೆಗೆ ಅನೇಕ ತ್ಯಾಗವನ್ನ ಮಾಡಿ ಪಕ್ಷ ಸಂಘಟನೆ ಮಾಡಿಕೊಂಡು ಮಾಡಿಕೊಂಡು ಬಂದಿದ್ದೇವೆ. ಆದರೆ ಇಂದು ಪಕ್ಷ ನನ್ನಗೆ ಟಿಕೆಟ್ ನೀಡದೆ ಅನ್ಯಾಯಮಾಡಿದೆ. ನನ್ನ ವಿರುದ್ಧ ಯಾವುದೇ ಸಿಡಿ ಪ್ರಕರಣವಾಗಲಿ, ಕಮೀಷನ್ ಆರೋಪವಾಗಲಿ ಯಾವುದೇ ಇಲ್ಲ. ಆದರೂ ನನ್ನಗೆ ಟಿಕೆಟ್ ನೀಡಲ್ಲ.
ನನ್ನಗೆ ಬಿಟ್ಟು ನನ್ನ ಕುಟುಂಬದವರಿಗೆ ಟಿಕೆಟ್ ನೀಡುವುದಾಗಿ ಹೇಳುತ್ತಾರೆ. ಅದು ನನ್ಮಗೆ ಬೇಕಾಗಿಲ್ಲ. ಬಿಜೆಪಿ ಟಿಕೆಟ್ ನನ್ನಗೆ ಬೇಕು. ಇಲ್ಲದೆಹೋದರೆ ನನ್ನ ನಿರ್ಧಾರವೆ ಭೇರೆ ಎಂದಿದ್ದಾರೆ. ಜಗದೀಶ ಶೆಟ್ಟರ್ ಅವರ ಜೊತೆ ಸಂಧಾನ ಮಾಡಲು ಬಂದಿದ್ದ ನಾಯಕರು ಮಾತು ಕತೆ ಸಪಲತೆ ಕಾಣದೆ ಇರುವುದರಿಂದ ವಾಪಸ್ ಆಗಿದ್ದಾರೆ.
ಅವರು ವಾಪಸ್ ಆಗುವಾಗ ಮಾಧ್ಯಮದವರ ಯಾವ ಪ್ರಶ್ನೆಗೂ ಉತ್ತರಿಸದೆ ಪ್ರಯಾಣಿಸಿದ್ದಾರೆ. ಆದರೆ ಪಕ್ಷದ ಸದಸ್ಯತ್ವಕ್ಕೆ ಜಗದೀಶ ಶೆಟ್ಟರ್ ರಾಜೀನಾಮೆ ಬಳಿಕ ಮುಂದೆ ಯಾವ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವುದೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಬಲ್ಲ ಮೂಲಗಳ ಪ್ರಕಾರ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿದೆ.