ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕುಂಭ ಮೇಳದಲ್ಲಿ ನಾಗಸಾಧು ಪರಂಪರೆಯ ಅತೀ ಶ್ರೇಷ್ಠ ೧೦೦೮ ಮಹಾಮಂಡಲೇಶ್ವರರಾಗಿ ನೇಮಕಗೊಂಡ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ ಕುಮಟಾದ ಕೋನಳ್ಳಿಯಲ್ಲಿ ಕೈಗೊಳ್ಳಲಿದ್ದು, ಅದರ ಪೂರ್ವಭಾವಿ ಸಭೆಯಲ್ಲಿ ಶ್ರೀಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಮಾ.೯ರಂದು ನಾಮಧಾರಿ ಸಭಾಭವನದಲ್ಲಿ ನಡೆಯಲಿದೆ ಎಂದು ನ್ಯಾಯವಾಧಿ ಆರ್ ಜಿ ನಾಯ್ಕ ತಿಳಿಸಿದರು.
ಕುಮಟಾ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇವಾ ಸಮಿತಿಯ ಜಿಲ್ಲಾ ಸಂಚಾಲಕರಾದ ಆರ್ ಜಿ ನಾಯ್ಕ ಅವರು, ಪ್ರಯಾಗ್ ರಾಜ್ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ನಮ್ಮ ಸಮಾಜದ ಕುಲಗುರುಗಳಾದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ನಾಗಸಾಧು ಪರಂಪರೆಯಲ್ಲಿಯೇ ಅತೀ ಶ್ರೇಷ್ಠ ಮತ್ತು ಪರಮೋಚ್ಛ ಹುದ್ದೆಯಾದ 1008 ಮಹಾಮಂಡಲೇಶ್ವರರನ್ನಾಗಿ ನೇಮಕ ಮಾಡಲಾಗಿದೆ. ಸಾಧುಸಂತ ಪರಂಪರೆಯಲ್ಲಿ ಇಡೀ ದಕ್ಷಿಣಭಾರತದಲ್ಲೆ ಇಂಥ ಶ್ರೇಷ್ಠ ಹುದ್ದೆ ಪಡೆದ ಸ್ವಾಮೀಜಿಗಳೆಂದರೆ ನಮ್ಮ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.
ಇಂಥ ಪರಮೋಚ್ಛ ಗೌರವ, ಸನ್ಮಾನ ದೊರೆತ ಬಳಿಕ ನಡೆಯಲಿರುವ ಮೊದಲ ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮ ನಡೆಸುವ ಸುವರ್ಣಾವಕಾಶ ನಮ್ಮ ಕುಮಟಾಕ್ಕೆ ಲಭಿಸಿದೆ.ಕುಮಟಾ, ಹೊನ್ನಾವರ ನಾಮಧಾರಿ ಸಂಘದವರು ಸೇರಿ ಈ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡು ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀವನದುರ್ಗ ದೇವಸ್ಥಾನದ ಆವರಣದಲ್ಲಿ ಶ್ರೀಗಳ ಜಾತುರ್ಮಾಸ್ಯ ವೃತಾಚರಣೆಯ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಿದ್ದೇವೆ. ಶ್ರೀಗಳು ಕೂಡ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಅದರ ಪೂರ್ವಭಾವಿ ಸಭೆ ಮಾ.9ರ ಬೆಳಗ್ಗೆ 10 ಗಂಟೆಗೆ ನಾಮಧಾರಿ ಸಭಾಭವನದಲ್ಲಿ ನಡೆಯಲಿದೆ. ಎಲ್ಲಾ ಸಮಾಜದ ಪ್ರಮುಖರು, ಗಣ್ಯರು, ವಿವಿಧ ಸಂಘಟನೆಗಳ ಪ್ರಮುಖರು ಮತ್ತು ನಾಮಧಾರಿ ಸಮಾಜದ ಪ್ರಮುಖರು ಪಾಲ್ಗೊಂಡು ಈ ಚಾತುರ್ಮಾಸ್ಯ ವೃತಾರಣೆಗೆ ಯೋಗ್ಯ ಸಲಹೆ, ಸೂಚನೆ ನೀಡುವ ಜೊತೆಗೆ ಸಂಪೂರ್ಣ ಸಹಕಾರ ನೀಡಬೇಕು. ಅಂದು ಶ್ರೀಗಳು ಕೂಡ ನಮ್ಮ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿರುವುದರಿಂದ ಅಂದು ಅವರಿಗೆ ಕುಮಟಾದ ಸಮಸ್ತ ಜನತೆಯ ಪರವಾಗಿ ಗೌರವ ಸಮರ್ಪಣೆ ಕೂಡ ನಡೆಸಲಿದ್ದೇವೆ. ಅಲ್ಲದೇ ಭಟ್ಕಳದ ಕರಿಕಲ್ ಧ್ಯಾನ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀರಾಮನ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಇದೇ ಮಾ. 4ರಂದು ನಡೆಯಲಿದೆ. ಅಂದು ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿ ರಾಮತಾರಕ ಮಹಾಯಜ್ಞ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸುವ ಮೂಲಕ ಶ್ರೀಗಳಿಂದ ಮಂತ್ರಾಕ್ಷತೆ ಪಡೆದು ಪುನೀತರಾಗಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಮಧಾರಿ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಪ್ರಮುಖರಾದ ಸುರೇಶ ನಾಯ್ಕ, ಅರುಣ ನಾಯ್ಕ,ಸಂತೋಷ ನಾಯ್ಕ, ಎಂ ಜಿ ನಾಯ್ಕ, ವೈಭವ ನಾಯ್ಕ, ಕಮಲಾಕರ ನಾಯ್ಕ, ಗಜು ನಾಯ್ಕ, ಪಾಂಡುರಂಗ ನಾಯ್ಕ, ಸಂಕೇತ ನಾಯ್ಕ, ಪ್ರಮೋದ ನಾಯ್ಕ,ರಾಜು ನಾಯ್ಕ, ವೆಂಕಟೇಶ ನಾಯ್ಕ, ಗಜಾನನ ನಾಯ್ಕ, ನಾಗೇಂದ್ರ ನಾಯ್ಕ ಇತರರು ಇದ್ದರು.
ಇದನ್ನೂ ಓದಿ