ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ:ನಿನ್ನೆ ರಾತ್ರಿ ಶಿರಸಿಯಿಂದ ಪತ್ನಿಯ ಜೊತೆ ಬೆಂಗಳೂರಿಗೆ ತೆರಳುತ್ತಿದ್ದ ವ್ಯಕ್ತಿಯ ಕೊಲೆ ಆರೋಪಿಯನ್ನ ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯ ವ್ಯಕ್ತಿಯ ಪತ್ನಿ ಕೈವಾಡ ಇರುವ ಬಗ್ಗೆ ಮೃತ‌ನ ಕುಟುಂಬಸ್ಥರು ಆಕೆ ವಿರುದ್ಧ ದೂರು ದಾಖಲಿಸಿದ್ದಾರೆ.

ಸಾಗರ ಮೂಲದ ಗಂಗಾಧರ ಶಿರಸಿಯಲ್ಲಿರುವ ಸಂಬಂಧಿಕರ ಮನೆಗೆ ಬಂದು ನಿನ್ನೆ ರಾತ್ರಿ ಪತ್ನಿಯ ಜೊತೆಯಲ್ಲೇ ಬೆಂಗಳೂರಿಗೆ ವಾಪಸಾಗಲು ಶಿರಸಿ ಬಸ್‌ನಿಲ್ದಾದಲ್ಲಿ ಬೆಂಗಳೂರು ಬಸ್‌ನಲ್ಲಿ ಕುಳಿತ್ತಿದ್ದ. ಆದ ಅಲ್ಲಿಗೆ ಬಂದ ಪ್ರೀತಮ್ ಡಿಸೋಜಾ ಎಂಬಾತ ಗಂಗಾಧರನಿಗೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಬಸ್‌ನಲ್ಲೆ ಹತ್ತೆ ಮಾಡಿ ಪರಾರಿಯಾಗಿದ್ದ.‌ಘಟನೆ ನಡೆದ ಕೆಲ‌ ಗಂಟೆಯಲ್ಲೇ ಕೊಲೆ ಪಾತಕಿಯನ್ನ ಬಂಧಿಸುವಲ್ಲಿ ಶಿರಸಿ ಪೊಲೀಸರು ಕೂಡ ಯಶಸ್ವಿಯಾಗಿದ್ದಾರೆ.

ಘಟನೆ ಬೆನ್ನಲ್ಲೆ ಶಿರಸಿಗೆ ಆಗಮಿಸಿದ ಮೃತ ಗಂಗಾಧರ ಕುಟುಂಬಸ್ಥರು ಕೊಲೆಯ ಹಿಂದೆ ಆತನ ಪತ್ನಿತ ಕೈವಾಡ ಇರುವ ಬಗ್ಗೆ ಗಂಭೀರವಾಗಿ ಆರೋಪಿಸಿದ್ದು, ಕೊಲೆ‌‌ ಮಾಡಿರುವ ಪ್ರೀತಮ್ ಹಾಗೂ ಗಂಗಾಧರ ಪತ್ನಿ ನಡುವೆ ಮೊದಲಿನಿಂದಲ್ಲೂ ಪ್ರೀತಿ ಇತ್ತು ಎಂದಿರುವ ಕುಟುಂಬಸ್ಥರು ಆ ವಿಚಾರ ತಮ್ಮ ಕುಟುಂಬಕ್ಕೆ ತಿಳಿದಿತ್ತು.‌ಆದರೆ ಮಧುವೆ ಆದ ನಂತರದಲ್ಲಿ ಪ್ರೀತಮ್ ಡಿಸೋಜ‌‌‌ನನ್ನ ಮರೆತಿರುವುದಾಗಿ ಆಕೆ ಹೇಳಿದ್ದಳು. ಆದರೆ ಈಗ ನೋಡಿದರೆ ಕೊಲೆಯಲ್ಲಿ ಅದರ ಕೈವಾಡ ಇದೆ ಎನ್ನುವುದು ಗೊತ್ತಾಗತ್ತಿದೆ ಎಂದು ಆರೋಪಿಸಿರುವ. ಮೃತ ಗಂಗಾಧರ ಸಹೋದರ ಸಂತೋಷ ಮತ್ತು ಅವನ ಕುಟುಂಬದವರು ವ್ಯಕ್ತಪಡಿಸುತ್ತಿದ್ದಾರೆ..

ಶವ ಪರೀಕ್ಷೆ ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಸಿಪಿಆಯ್ ಶಶಿಕಾಂತ ವರ್ಮಾ ಸ್ಥಳದಲ್ಲಿದ್ದು ತನಿಖೆ ಚುರುಕುಗೊಳಿಸಿದ್ದಾರೆ..

ಇದನ್ನೂ ಓದಿ