ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಸನಾತನ ಧರ್ಮೀಯರ ಅಧ್ಯಾತ್ಮ ಲೋಕದ ನಂಬಿಕೆ, ಶ್ರೇಷ್ಠ ಪರಂಪರೆ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾಗಿ 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್‌ ರಾಜ್‌ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕುಟುಂಬ ಸಮೇತರಾಗಿ ಪುಣ್ಯ ಸ್ನಾನ ಮಾಡಿ ಪುನೀತರಾದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ ಪುತ್ರ ಪರ್ಬತ್‌, ಸೊಸೆ ರೇಖಾ ಮತ್ತು ಮೊಮ್ಮನ ರಿಹಾನ್‌ನೊಂದಿಗೆ ಪುಣ್ಯಸ್ನಾನ ಮಾಡುವ ಮೂಲಕ ಪುನೀತ ಭಾವ ಮೂಡಿಸಿತು. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟವಾದ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಾದ ಶ ಯೋಗಿ ಆಧಿತ್ಯನಾಥ್‌ ಅವರ ರಾಜ್ಯ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದೀಜಿಯವರು ಕೇಂದ್ರ ಸರ್ಕಾರ ಸಕಲ ಸಿದ್ಧತೆಗಳ‌‌ ಬಗ್ಗ ರೂಪಾಲಿ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು..

ಸನಾತನಿಗಳು ಗರ್ವ ಪಡುವ ಮಹಾಕುಂಬ ಪರ್ವಕ್ಕೆ ಯೋಗಿಜೀ ಮತ್ತು ಮೋದೀಜೀ ಭಕ್ತರ ಅನುಕೂಲಕ್ಕಾಗಿ ಮಾಡಿದ ವ್ಯವಸ್ಥೆ ನಿಬ್ಬೆರಗಾಗಿಸುವಂತಹದ್ದು ಎಂದರು..

ಇದನ್ನೂ ಓದಿ