ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಬೆಳಗಾವಿಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಒಂದೇ ಕುಟುಂಬದವರು ಚಲಿಸುತ್ತಿದ್ದ ಕಾರೊಂದಕ್ಕೆ ಹಿಂಬದಿಯಿಂದ ಟ್ಯಾಂಕರ್ ಗುದ್ದಿರುವ ಪರಿಣಾಮ ಕಾರಿನಲ್ಲಿದ್ದ ಇಬ್ಬರೂ ಗಾಯಗೊಂಡು ಆಸ್ಪತ್ರಗೆ ದಾಖಲಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಅರಬೈಲ್ ಬಳಿ ನಡೆದಿದೆ.

ಈ ಕಾರು ಬೆಳಗಾವಿಯಿಂದ ಧರ್ಮಸ್ಥಕ್ಕೆ ಚಲಿಸುತ್ತಿದ್ದು, ಅರಬೈಲ್ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಇನ್ನೊಂದು ಬದಿಯಿಂದ‌ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಈ ಕಾರು ಇನ್ನೊಂದು ಬದಿಯಲ್ಲಿ ಕಂಟೇನರ್ ವಾಹನದ ಹಿಂಬದಿಯಲ್ಲಿ ನಿಂತಿದ್ದು, ಈ ವೇಳೆ ಯಲ್ಲಾಪುರ ಕಡೆಯಿಂದ ಅತೀವೇಗವಾಗಿ ಬಂದ ಟ್ಯಾಂಕರ್ ನೇರವಾಗಿ ಕಾರ ಹಿಂಬದಿಗೆ ಡಿಕ್ಕಿ ಹೊಡೆದಿದೆ.‌

ಇದರಿಂದ ಕಾರು ಎದುರುಗಡೆ ಇದ್ದ ಕಂಟೇನರ್ ಒಳಗೆ ನುಗ್ಗಿದ್ದು, ಪರಿಣಾಮ ಕಾರಿನಲ್ಲಿ ಇದ್ದ ಆರು ಮಂದಿ ಪೈಕಿ ಇಬ್ಬರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಯಲ್ಲಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ