ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ :‌ನಗರದಲ್ಲಿನ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ನಡೆಸುತ್ತಿರುವ ಹೋರಾಟಕ್ಕೆ,ಉಪವಾಸ ಸತ್ಯಾಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು,ಸಮಾಜಕ್ಕೆ ಒಳ್ಳೆಯದಾಗುವ ಯಾವುದೇ ನಿರ್ಣಯ ಅವರು ಕೈಗೊಂಡರೂ ನಾನು ಬೆಂಬಲಿಸುತ್ತೆನೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸೋಮವಾರ ಅವರು ನಗರದ ತಹಶೀಲ್ದಾರ ಕಛೇರಿಯಲ್ಲಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬಿಜೆಪಿ ಮುಖಡಂರ ಜೊತೆಗೆ ಆಗಮಿಸಿ ಮಾತನಾಡಿದರು. ಅನಂತಮೂರ್ತಿ ಹೆಗಡೆ ಅವರು ಪ್ರಾರಂಭಿಸಿದ ಈ ಉಪವಾಸ ಸತ್ಯಾಗ್ರಹಕ್ಕೆ ನನ್ನ ಬೆಂಬಲವಿದೆ.‌ ಮುಂದಿನ ಹೋರಾಟದ ಕುರಿತು ನೀವು ನಿಮ್ಮ ಸಮಿತಿಯೊಡನೆ ಚರ್ಚಿಸಿ ರೂಪುರೇಷೆ ರೂಪಿಸಿಕೊಳ್ಳಿ. ನೀವು ಯಾವುದೇ ನಿರ್ಣಯ ಕೈಗೊಂಡರೂ ನನ್ನ ಬೆಂಬಲ ಇರುತ್ತದೆ.ಶಿರಸಿಯಲ್ಲಿ ಒಂದು ಹೈಟೆಕ್ ಆಸ್ಪತ್ರೆ ನಿರ್ಮಾಣ ಆಗಲೇಬೇಕು. ಈ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುವುದಕ್ಕಾಗಿಯೇ ಜಿಲ್ಲೆಯ ಬಿಜೆಪಿ ಹಿರಿಯ ನಾಯಕರೆಲ್ಲರೂ ಇಲ್ಲಿ ಬಂದಿದ್ದೇವೆ ಎಂದರು.

ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಪ್ರಮುಖವಾಗಿ ನಾವು ಇಂದು ಮೂರು ಬೇಡಿಕೆಗಳನ್ನು ಸರಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಪಂಡಿತ್ ಸಾರ್ವಜನಿಕ ಅಸ್ಪತ್ರೆ ಹಿಂದೆ ನಿಗದಿಯಾಗಿದ್ದ ರೂ. 30ಕೋಟಿ ರೂಪಾಯಿ ಹಣದ ಸಲಕರಣೆಗಳು ಅಂದರೆ ಎಂ.ಆರ್.ಐ‌ ಸ್ಕ್ಯಾನ್, ಸಿಟಿ ಸ್ಕ್ಯಾನ್, ಕ್ಯಾತಲ್ಯಾಬ್, ಹಾರ್ಟ್ ಅಪರೇಷನ್ ಸೌಲಭ್ಯ, ತುರ್ತು ಚಿಕಿತ್ಸೆಯ ಟ್ರಾಮಾ ಸೆಂಟರ್, ಎಲ್ಲಾ ಸೌಲಭ್ಯ ಸಿಗುವಂತಾಗಬೇಕು

ಈಗಾಗಲೆ 80% ಕೆಲಸ ಆಗಿರುವುದರಿಂದ ಸಲಕರಣೆ ಟೆಂಡರ್, ಸ್ಪೆಷಲಿಸ್ಟ್ ವೈದ್ಯರ ನೇಮಕ ತಕ್ಷಣ ಮಾಡಬೇಕು.ಈಗಿರುವ ಪಂಡಿತ್ ಸಾರ್ವಜನಿಕ ಅಸ್ಪತ್ರೆಯಲ್ಲಿ ಕಳೆದ ಸುಮಾರು 2ವರ್ಷಗಳಿಂದ ಜನರಲ್ ಫಿಜೀಷಿಯನ್ ಇಲ್ಲ.ಹಣ ಉಳ್ಳವರು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಬಹುದು. ಆದರೆ ಬಡವರು ಎಲ್ಲಿ ಹೋಗಬೇಕು‌?‌ ಬಡ ರೋಗಿಗಳಿಗಾಗಿ ತಕ್ಷಣ ಜನರಲ್ ಪಿಜೀಷಿಯನ್ನೇ ಮಕವಾಗಬೇಕು. ಮತ್ತು ಶಿರಸಿಯ ನೂರಾರು ಜನ ಪ್ರತಿನಿತ್ಯ ಕಾರವಾರದ ಜಿಲ್ಲಾ ಆಸ್ಪತ್ರೆಯ ಮುಂದೆ ಆಯುಷ್ಮಾನ್ ಕಾರ್ಡ್ ರೆಫರಲ್ ಲೆಟರ್ ಕಾರಣಕ್ಕೆ ಕಣ್ಣೀರು ಹಾಕುತ್ತಿದ್ದಾರೆ.ತಮ್ಮ ಕುಟುಂಬದ ಸದಸ್ಯರನ್ನು ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಇರಿಸಿಕೊಂಡು ಕಣ್ಣಿರು ಹಾಕುತ್ತಾ, ಕಾರವಾರದ ಆಸ್ಪತ್ರೆ ಮುಂದೆ ಕುಳಿತಿದ್ದಾರೆ,ಅಲ್ಲಿಯ ಡಾಕ್ಟರಗಳು ರೆಫರಲ್ ಗೆ ಲೆಟರ್ ಸಹಿ ಹಾಕದೆ 2 -3 ದಿನ ಅಲೆಸುತ್ತಾರೆ. ತುರ್ತು ಚಿಕಿತ್ಸೆಯ ಅಗತ್ಯ ಇರುವ ರೋಗಿ ಹೇಗೆ ಬದುಕಬೇಕು ? ರೋಗಿಯ ಜೊತೆ ಯಾರು ಇರುತ್ತಾರೆ. ಕಾರವಾರಕ್ಕೆ ಹೋಗಿ ಯಾರು 3 ದಿನ ಆಸ್ಪತ್ರೆ ಬಾಗಿಲು ಕಾಯುತ್ತಾರೆ ? ಅದಕ್ಕಾಗಿ ಸರ್ಕಾರ ಆಯುಷ್ಮಾನ ರೆಫರಲ್ ಲೆಟರ್ ಶಿರಸಿಯಲ್ಲೇ ಕೊಡಲು ವ್ಯವಸ್ಥೆ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.

ಶಿರಸಿ ನಗರದ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಶಿವಾಜಿ ಚೌಕದಲ್ಲಿರುವ ಛತ್ರಪತಿ ಶಿವಾಜಿ ಪುತ್ಥಳಿಗೆ ಮಾಲಾರಗೊಣೆ ಮಾಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ ಕಛೇರಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಅನಂತಮೂರ್ತಿ ಹೆಗಡೆ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ, ಮಾಜಿ ಶಾಸಕರುಗಳಾದ ಶಿವಾನಂದ ನಾಯ್ಕ, ವಿವೇಕಾನಂದ ವೈದ್ಯ, ಕೆಡಿಸಿಸಿ ಮಾಜಿ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ್, ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಶಿರಸಿ ನಗರಾಧ್ಯಕ್ಷ ಆನಂದ ಸಾಲೇರ್, ಸಿದ್ದಾಪುರ ತಾಲೂಕು ಅಧ್ಯಕ್ಷ ತಿಮ್ಮಪ್ಪ ಮಡಿವಾಳ, ಕುಮಟಾ ಮಂಡಲಾಧ್ಯಕ್ಷ ಜಿ.ಐ.ಹೆಗಡೆ, ಅಂಕೋಲಾ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಸೇರಿದಂತೆ ಸಮಸ್ತ ಬಿಜೆಪಿ ತಂಡವೇ ಉಪವಾಸ ಸತ್ಯಾಗ್ರಹದಲ್ಲಿ ಬೆಂಬಲ ನೀಡಿತು.

ಗಮನಿಸಿ