ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಪ್ರವಾಸಿಗರೊಬ್ಬರ ಬೈಕ್ಗೆ ಆಕಸ್ಮಿಕ ಬೆಂಕಿ ತಗುಲಿ ಬೈಕ್ ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ಅಮದಳ್ಳಿ ಬಳಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಶಾವೇಶ್ ಎಂಬುವವರಿಗೆ ಸೇರಿದ ಜಾವಾ ಬೈಕ್ ಇದಾಗಿದೆ. ಇವರು ಸ್ನೇಹತರೆಲ್ಲರೂ ಸೇರಿ ಉತ್ತರ ಪ್ರದೇಶದಿಂದ ಬೈಕ್ ಮೂಲಕ ಪ್ರವಾಸಕೈಗೊಂಡಿದ್ದರು.. ನಿನ್ನೆ ರಾತ್ರಿ ಮುರುಡೇಶ್ವರದಲ್ಲಿ ವಾಸ್ತವ್ಯ ಮಾಡಿದ್ದ ಇವರು ಇಂದು ಬೆಳಿಗ್ಗೆ ಮುರುಡೇಶ್ವರದಿಂದ ಗೋವಾ ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೈಕ್ಗೆ ಬೆಂಕಿ ಹತ್ತಿಕೊಂಡಿದೆ.
ತಕ್ಷಣ ಇವರ ಹಿಂಬದಿಯಲ್ಲಿ ಬರುತ್ತಿದ್ದ ಇನ್ನೋರ್ವ ಸ್ನೇಹತರು ಬೈಕ್ಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿದ್ದಯ, ಬೈಕ್ನಲ್ಲಿದ್ದ ಶಾವೇಶ್ ಬೈಕ್ ಮೇಲಿನಿಂದ ಹಾರಿಕೊಂಡಿದ್ದಾರೆ. ಸದ್ಯ ಇವರು ಪ್ರಾಣಾಪಾಯದಿಂದ ಪಾರಾಗಿದ್ದು,ಆದರೆ ಇವರು ಚಲಿಸುತ್ತಿದ್ದ ಬೈಕ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಘಟನಾ ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಮನಿಸಿ
- ಶಿರಾಲಿ ದುರಂತ: ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಮಂಕಾಳ ವೈದ್ಯ : ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತ ಸಚಿವರು
- ಶಿರಾಲಿ ದುರಂತ : ಸಾವಿನ ಸಂಖ್ಯೆ 11ಕ್ಕೆ ಏರಿಕೆ ನಾಪತ್ತೆಯಾಗಿದ್ದ ಇಬ್ಬರ ಶವ ಪತ್ತೆ, ಮತ್ತೊಬ್ಬರಿಗಾಗಿ ಶೋಧ
- Exclusive ಭಟ್ಕಳದ ಶಿರಾಲಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಒಂದೇ ಕುಟುಂಬದ 8ಮಂದಿ ಸಾವನ್ನಪ್ಪಿರುವ ಶಂಕೆ
- ರಾಫ್ಟಿಂಗ್ ವೇಳೆ ವಿದ್ಯುತ್ ಶಾಕ್ – ಪ್ರವಾಸಿಗ ಸಾವು

