ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ:ತಾಲೂಕಿನಾದ್ಯಂತ ನಡೆಯುತ್ತಿರುವ ಓಸಿ ಮಟ್ಕಾ ದಂಧೆಯನ್ನ ತಡೆಗಟ್ಟಲು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಕೇಳ ಹಂತದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಖಡಕ್ ಆದೇಶ ನೀಡಿದರೂ ಸಹ ಪಟ್ಟಣ. ಸೇರಿದಂತೆ ಗ್ರಾಮೀಣ ಪ್ರದೇಶದ ಗಲ್ಲಿಗಲ್ಲಿಯಲ್ಲಿ ಓಸಿ ದಂಧೆ ಜೋರಾಗಿದೆ.
ಓಸಿ ದಂಧೆಯನ್ನ ನಿಯಂತ್ರಿಸಬೇಕು ಎನ್ನುವ ಕಾರಣಕ್ಕೆ ಇಲ್ಲಿಗೆ ಬಂದ ಚಂದ್ರಶೇಖರ ಮಠಪತಿ ಸಾಹೇಬ್ರು ತಮ್ಮ ಇಲಾಖೆಯ ವಾಟ್ಸಾಪ್ ಗ್ರೂಪಗಳಿಗೆ ಓಸಿ ದಂಧೆ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ದಾಳಿ ಮಾಡಿ ಎಂದು ಎಲ್ಲರಿಗೂ ಖಡಕ್ ಸೂಚನೆ ನೀಡಿದ್ದರು. ಎನ್ನಲಾಗಿದೆ.ಈ ವಿಚಾರವನ್ನ ಗೌಪ್ಯವಾಗಿ ಇಟ್ಟು ದಾಳಿ ಮಾಡಬೇಕಾದ ಅಧಿಕಾರಿಗಳು,ಸಿಬ್ಬಂದಿಗಳು ಓಸಿ ದಂಧೆ ನಡೆಸುವವರಿಗೆ ಈ ವಿಚಾರವನ್ನ ತಿಳಿಸಿ.ನಮ್ಮ ಸಾಹೇಬ್ರು ಈ ರೀತಿ ಸೂಚನೆ ನೀಡಿದ್ದಾರೆ. ನೀವುಗಳು ಸ್ವಲ್ಪ ಎಚ್ಚರಿಕೆಯಿಂದ ಓಸಿ ತೆಗೆದಕೊಳ್ಳಿ, ನಿಮ್ಮ ಜೊತೆ ನಾವು ಇರತ್ತವೆ ಅಂತಾ ಹೇಳಿದ್ದಾರೆ ಎನ್ನುವ ಬಗ್ಗೆ ಓಸಿ ತೆಗೆದುಕೊಳ್ಳುವವರೆ ಅನೇಕ ಕಡೆಯಲ್ಲಿ ಹೇಳಿಕೊಂಡಿದ್ದಾರೆನ್ನಲಾಗುತ್ತಿದೆ.
ಇನ್ನೂ ಮೊನ್ನೆಯಷ್ಟೆ ಗ್ರಾಮೀಣ ಭಾಗ ಒಂದಲ್ಲಿ ಓಸಿ ತೆಗೆದುಕೊಳ್ಳುವ ವೇಳೆ ದಾಳಿ ನಡೆಸಿದ ಪೊಲೀಸರು ಓರ್ವನನ್ನ ವಶಕ್ಕೆ ಪಡೆದು ಪ್ರಕರಣ ಸಹ ದಾಖಲಿಸಿಕೊಂಡಿದ್ದಾರೆ. ಆದರೆ ಆ ವ್ಯಕ್ತಿ ತಾನು ತೆಗೆದುಕೊಂಡ ಓಸಿ ನಂಬರ್ ಯಾವ ಬುಕ್ಕಿಗೆ ವಾಟ್ಸಾಟ್ ಮೂಲಕ ನಂಬರ್ ಕಳುಹಿಸುತ್ತಿದ್ದ ಎನ್ನುವ ಬಗ್ಗೆ ದಾಖಲೆ ಸಹ ದಾಳಿ ನಡೆಸಿದ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಆದರೆ ಆ ಬುಕ್ಕಿ ಯಾರು ಎನ್ನುವ ಬಗ್ಗೆ ಪೊಲೀಸ್ಗೆ ಪಕ್ಕಾ ಮಾಹಿತಿ ಸಿಕ್ಕರು ಯಾಕೆ ತಲೆ ಕೆಡಿಸಿಕೊಂಡಿಲ್ಲ ಎಂದು ಅಂಕೋಲೆಯ ಜನ ಹಾದಿ ಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ.ಇನ್ನೂ ದಾಳಿ ನಡೆಸಿದ ವೇಳೆ ವಶಕ್ಕೆ ಪಡೆದ ವ್ಯಕ್ತಿ ಬಳಿ ಯಾವುದಕ್ಕೂ ನೀ ಹೆದರೋದು ಬೇಡ “ಚಾರ್ಶಿಟ್ನಲ್ಲಿ” ನಿಮ್ಮ ಹೆಸರು ಬರದಂತೆ ನೋಡಕೊಳ್ಳತ್ತೇವೆ ಅಂತಾ ಕೂಡ ದಾಳಿ ನಡೆಸಿದ ಆದಿಕಾರಿಗಳೆ ಹೇಳಿದ್ದಾರೆ ಎನ್ನುವದು ಗುಟ್ಟಾಗಿ ಉಳಿದುಕೊಂಡಿಲ್ಲ..
ಮೊದ ಮೊದಲು ಜನರಿಂದ ಓಸಿ ತೆಗೆದುಕೊಳ್ಳುತ್ತಿದ್ದ ಕೆಲ ಗೂಡಂಗಡಿಕಾರರು ಓಕ್ಕಿಗಳಿಗೆ ಕೊಡುತ್ತಿದ್ದರಂತೆ. ಆದರೆ ಈಗ ಅನೇಕ ಗೂಡಂಗಡಿಕಾರರೆ ಜನರಿಂದ ಸಗ್ರಹಿಸಿದ ಓಸಿ ಹಣವನ್ನ ತಾವೇ ಇಟ್ಟುಕೊಂಡು ತಮ್ಮ ರಕ್ಷಿಣೆಗೆ ನಿಲ್ಲುವವರಿಗೆ ಒಂದಿಷ್ಟು ಕಪ್ಪವನ್ನ ಕೊಟ್ಟು ದಂಧೆ ನಡೆಸುತ್ತಿದ್ದಾರಂತೆ.ಇನ್ನೂ ಈ ರೀತಿ ಮಾಡುವುದರಿಂದ ಕಪ್ಪ ಪಡೆಯುವವರಿಗೂ ಆದಾಯ ಹೆಚ್ಚಾಗಿದಂತೆ.ಹೀಗಾಗಿ ಅಂಕೋಲಾ ಠಾಣೆಯ ಹಿರಿಯ ಅಧಿಕಾರಿಗಳ ಆದೇಶಕ್ಕೆ ಕಿಮ್ಮತ್ತೆ ಇಲ್ಲದಂತಾಗಿದೆ.
ಗಮನಿಸಿ