ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ತಾಲ್ಲೂಕಿನ ಬಿಣಗಾದ ಗ್ರಾಸಿಮ್ ಇಂಡಸ್ಟ್ರಿಯಲ್ಲಿ(Grasim Industries) ಅನುಮಾನಾಸ್ಪದವಾಗಿ ಕಾರ್ಮಿಕ ನೊರ್ವ ಸಾವನ್ನಪ್ಪಿದ್ದಾನೆ.

ಬೈತಖೋಲ ಮೂಲದ ನಾಗರಾಜ ವಿಷ್ಣು ಅವರ್ಸೇಕರ್(41) ಮೃತ ದುರ್ದೈವಿಯಾಗಿದ್ದಾನೆ. ಇತ ಬಿಣಗಾದಲ್ಲಿರುವ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಕಾರ್ಮಿಕನಾಗಿದ್ದ, ಇನ್ನೂ ಯುವಕ ಸಾವನ್ನಪ್ಪಿರುವ ಬಗ್ಗೆ  ಆತನ ಕುಟುಂಬಸ್ಥರು ಬಾಯರ್‌ನಲ್ಲಿ ಅನಿಲ ಸೋರಿಕೆ ಉಂಟಾಗಿ ಆತ ಸಾವನ್ನಪ್ಪಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.

ಬಿಣಗಾದ ಸೋಲಾರಿಸ್ ಕೆಮಿಟೆಕ್ ಕಂಪೆನಿಯಲ್ಲಿ (Solaris Chemitech Company) ರಾತ್ರಿ ಪಾಳಿಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ರಾತ್ರಿ 11:30ರ ಸುಮಾರಿಗೆ ಬಾಯರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದೆ ಎನ್ನಲಾಗಿದೆ.  ಇದರಿಂದಾಗಿ ನಾಗರಾಜ ಮೃತಪಟ್ಟಿರಬಹುದೆಂದು ಹೇಳಲಾಗುತ್ತಿದೆ.ಉಳಿದ ಕಾರ್ಮಿಕರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಾರವಾರ ಗ್ರಾಮೀಣ ಠಾಣೆಯಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ದೂರು ದಾಖಲಾಗಿದೆ.

ಗಮನಿಸಿ