ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು:ಉದ್ಯಮಿ ಓರ್ವರಿಗೆ‌ ಕೇಂದ್ರ ಸಚಿವ ಕುಮಾರಸ್ವಾಮಿ‌‌ ಅವರು ಕೋಟಿ‌ ಕೋಟಿ ಹಣಕ್ಕಾಗಿ ಬೆದರಿಕೆ‌ ಹಾಕಿದ್ದಾರೆಂದು ಆರೋಪಿಸಿ‌ ಉದ್ಯಮಿ‌ ವಿಜಯ್ ಟಾಟಾ ಎಂಬುವವರು ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಎಂಬವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಇದರಿಂದಾಗಿ ಬಂಧನ‌‌ಭೀತಿ ಎದಿರಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಅವರ ಬಳಿ ಕೇಂದ್ರ ಸಚಿವ ಕುಮಾರಸ್ವಾಮಿ 50ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಾರೆಂಬ ಆರೋಪದಡಿಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ರಮೇಶ್‌ಗೌಡ ಎ1 ಆರೋಪಿಯಾಗಿದ್ದು, ಕುಮಾರಸ್ವಾಮಿ ಎ2 ಆರೋಪಿಯಾಗಿದ್ದಾರೆ. 22 3 3(05), 308(02), 351(02) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಗಮನಿಸಿ