suddibindu.in
ಶಿರಸಿ: ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಗುಣವನ್ನು ಪ್ರತಿಯೋರ್ವ ವಿದ್ಯಾರ್ಥಿಯು ರೂಡಿಸಿಕೊಳ್ಳಬೇಕು. ಇಂದು ಕಲಿಕೆಗೆ ಹಲವು ರೀತಿಯಲ್ಲಿ ವೇದಿಕೆಗಳು ಸಿಗುತ್ತಿವೆ. ಅದರಲ್ಲಿ ನಮ್ಮ ಪ್ರತಿಭೆಯ ಅನಾವರಣ ಮಾಡಿದಾಗ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಪತ್ರಕರ್ತ ರಾಜು ಕಾನಸೂರು ಹೇಳಿದರು.

ಅವರು ಕಾನಸೂರಿನ ಇಂದಿರಾಗಾಂಧಿ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದ ಕಾನಸೂರು ವಲಯದ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಪ್ರತಿಭೆ ಗುರುತಿಸಿಕೊಳ್ಳಲು ಇಂತಹ ವೇದಿಕೆಗಳು ಬಲು ಉಪಕಾರಿಯಾಗುತ್ತದೆ. ವಿದ್ಯೆ ಕಲಿತವರೆಲ್ಲ ಸರಕಾರಿ ನೌಕರಿ ಪಡೆಯುತ್ತಾರೆ ಎಂಬುದು ಸುಳ್ಳು. ವಿದ್ಯೆ ನಮ್ಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಆದರೇ ನಮ್ಮ ಪ್ರತಿಭೆ ಜೀವನವನ್ನೇ ರೂಪಿಸುತ್ತದೆ. ಇಂತಹ ಪ್ರತಿಭೆಗಳು ಹೆಚ್ಚೆಚ್ಚು ಸಮಾಜದಲ್ಲಿ ಪರಿಚಯಗೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಸ ನಾಯ್ಕ ಮಾತನಾಡಿ ವಿದ್ಯಾಥಿಗಳ ಪ್ರತಿಭೆಯ ಅನಾವರಣ ಮಾಡಲು ಇದೊಂದು ಸೂಕ್ತ ವೇದಿಕೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನಸೂರು ಗ್ರಾಮ ಪಂಚಾಯತ ಅಧ್ಯಕ್ಷೆ ಅನಿತಾ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಆರ್.ಕೆ. ರವಿ, ಸವಿತಾ ಕಾನಡೆ, ಮೀನಾ ಬೋರ್ಕರ, ಗಜಾನನ ಹೆಗಡೆ ಮುಂತಾದವರು ಉಪಸ್ಥಿತರೊದ್ದರು. ಪ್ರಾರಂಭದಲ್ಲಿ ಮುರಾರ್ಜಿ ಶಾಲೆಯ ವಿಧ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡಗೀತೆಯನ್ನು ಹಾಡಿದರು. ಪ್ರಾಂಶುಪಾಲ ಸುಧಾಕರ ನಾಯ್ಕ ಸ್ವಾಗತಿಸಿದರು. ಮುಕ್ತಾ ಎಂ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಬೂತನಹ ವಂದಿಸಿದರು. ನಂತರ ಎಳು ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಡೆದವು.

ಇದನ್ನೂ ಓದಿ