suddibindu.in
ಕಾರವಾರ : ಸಿಬರ್ಡ್ ನೌಕಾನೆಗೆ ಸಂಬಂಧಿಸಿದ ಒಂದಿಷ್ಟು ಮಹತ್ವದ ಮಾಹಿತಿಯನ್ನ ಸೋರಿಕೆ ಮಾಡಲಾಗದೆ ಎನ್ನುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದು, ಮೂವರನ್ನ ತೀವ್ರ ವಿಚಾರಣೆ ನಡೆಸಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ಸೇರಿ ಮೂರು ಕಡೆಯಲ್ಲಿ ದಾಳಿ ನಡೆಸಲಾಗಿದ್ದು, ಕಾರವಾರ ತಾಲೂಕಿನ ಮುದಗಾ ನಿರಾಶ್ರಿತರ ಕಾಲೋನಿ, ತೋಡೂರು ಹಾಗೂ ಗೋಕರ್ಣದ ಹನೆಹಳ್ಳಿಯಲ್ಲಿ ಎನ್ಐ(NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೀಬರ್ಡ್ ನೌಕಾನೆಯಲ್ಲಿ (SEABIRD NOUKANELE) ಕೆಲಸ ನಿರ್ವಹಿಸುತ್ತಿದ್ದ ಮೂವರು ಅಲ್ಲಿನ ಮಹತ್ವ ಮಾಹಿತಿಯನ್ನ ಸೋರಿಕೆ ಮಾಡಿದ್ದರು ಎನ್ನಲಾಗಿದೆ. ಈ ಆರೋಪದ ಮೇಲೆ ಎನ್ ಎ ಐ (NIA) ಈ ದಾಳಿ ನಡೆಸಿದೆ ಎನ್ನಲಾಗಿದೆ.
ಮೂವರನ್ನ ಗೌಪ್ಯ ಸ್ಥಳಕ್ಕೆ ಕರೆದಿಯ್ಯದ್ದು ವಿಚಾರಣೆ ನಡೆಸಲಾಗುತ್ತದೆ. ವಶಕ್ಕೆ ಪಡೆಯಲಾಗಿರುವ ಮೂವರ ಬ್ಯಾಂಕ್ ದಾಖಲೆ ಹಾಗೂ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ.ನಿನ್ನೆ ಸಂಜೆಯೇ ಎನ್ಐಎ ತಂಡ ಕಾರವಾರಕ್ಕೆ ಆಗಮಿಸಿದ್ದು, ಇಂದು ಮಧ್ಯಾಹ್ನ ದಾಳಿಗೆ ಇಳಿದಿದೆ. ದಾಳಿಯ ಕುರಿತಾಗಿ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ