suddibindu.in
ಬೆಂಗಳೂರು : ರೇಣುಕಾಸ್ವಾಮಿ ‌ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ರಾಜಾತಿಧ್ಯ ನೀಡಲಾಗಿತ್ತಿದೆ ಎನ್ನುವ ಪೊಟೋ ವೈರಲ್ ಆದ ಬೆನ್ನಲ್ಲೇ ಇದೀಗ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರ್ಟ್ ಆದೇಶ ನೀಡಿದೆ.

ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ‌ಕೊಲೆ‌ ಪ್ರಕರಣದ‌ ಇನ್ನೂಳಿದ ಆರೋಪಿಗಳನ್ನು ಸಹ ಇದೀಗ ಬೇರೆ ಬೇರೇ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.ನ್ಯಾಯಾಲಯದ ಆದೇಶದ ಪ್ರತಿ ಸಿಗುತ್ತಿದ್ದಂತೆ ಜೈಲು ಸಿಬ್ಬಂದಿ ದರ್ಶನ್‌ಗೆ ಬಳ್ಳಾರಿ‌ ಜೈಲಿಗೆ ಸ್ಥಳಾಂತರಿಸಲಿದ್ದಾರೆ.

ಉಳಿದವರು ಯಾವ ಜೈಲೆಗೆ ಸ್ಥಳಾಂತರ.?
ನಟ ದರ್ಶನ್ : ಬಳ್ಳಾರಿ ಜೈಲು,ಪವಿತ್ರಗೌಡ: ಪರಪ್ಪನ ಅಗ್ರಹಾರ ಪವನ್ ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಜಗದೀಶ್: ಶಿವಮೊಗ್ಗ, ಧನರಾಜ್‌ : ಧಾರವಾಡ ಜೈಲು, ವಿನಯ್: ವಿಜಯಪುರ ಜೈಲು, ನಾಗರಾಜ್‌: ಕಲಬುರಗಿ, ಲಕ್ಷ್ಮಣ: ಶಿವಮೊಗ್ಗ, ಪ್ರದೂಷ್: ಬೆಳಗಾವಿ,ಅನುಕುಮಾರ್: ಪರಪ್ಪನ ಅಗ್ರಹಾರ, ದೀಪಕ್: ಪರಪ್ಪನ ಅಗ್ರಹಾರ…

ಇದನ್ನೂ ಓದಿ