suddibindu.in
Vijayanagar :ವಿಜಯನಗರ : ಮೂಡಾ ವಿಚಾರದಲ್ಲಿ ಸಿಎಂ ಅವರ ತಪ್ಪು ಮಾಡಿಲ್ಲ. ಸುಖ ಸುಮ್ಮನೇ ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆಂದು ಉತ್ತರಕನ್ನಡ ಜಿಲ್ಲಾ ಉಸ್ರುವಾರಿ ಸಚಿವ ಮಂಕಾಳು ವೈದ್ಯ ಅವರು ಸಿಎಂ ಮೇಲಿನ ಆರೋಪವನ್ನ ತಳ್ಳಿಹಾಕಿದ್ದಾರೆ.
ವಿಜಯನಗರದಲ್ಲಿ ಈ ಕುರಿತು ಮಾತನಾಡಿದ ಸಚಿವರು ಮೂಡಾ ವಿಚಾರದಲ್ಲಿ ರಾಜ್ಯಪಾಲರ ನಡೆ ಖಂಡನೀಯವಾಗಿದೆ. ಅವರು ಕೇಂದ್ರದ ಬಿಜೆಪಿ ಏಜೆಂಟ್ ಅಂತೆ ವರ್ತಿಸುತ್ತಿದ್ದಾರೆಂದರು.
ಇದನ್ನೂ ಓದಿ
- ವಿನಾಯಕ (ವಿನು) ನಾಯ್ಕ ಅವರಿಗೆ ‘ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ’ ಪ್ರದಾನ
- ಹಬ್ಬದ ಸಂಭ್ರಮದ ಬೆನ್ನಲ್ಲೇ ಸಾವಿನ ಸರಣಿ; ಒಂದೇ ಕುಟುಂಬದ ಮೂವರು ಸೇರಿ ಹಲವರು ಬಲಿ
- ದಾಂಡೇಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಅವ್ಯವಸ್ಥೆ; ಗಬ್ಬು ನಾರುತ್ತಿರುವ ಸ್ವಿಮ್ಮಿಂಗ್ ಪೂಲ್
ಮುಖ್ಯಮಂತ್ರಿಯವರ ಬದಲಾವಣೆಯ ಸುಳಿವು ಸಿಕ್ಕಿದೆ ಎಂಬ ವಿಜಯೇಂದ್ರ ಹೇಳಿಕೆ ವಿವಾಚರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವರು ಬಿಜೆಪಿಯವರು ಸುಖಸುಮ್ಮನೆ ಸುಳ್ಳುಗಳನ್ನು ಹೇಳುತ್ತಿದ್ದಾರೆ, ಬಿಜೆಪಿಯವರು ಸುಳ್ಳು ಹೇಳುವಲ್ಲಿ ನಿಸೀಮರು.136 ಶಾಸಕರ ಬೆಂಬಲದಿಂದ ಸರ್ಕಾರ ರಚನೆಯಾಗಿದೆ, ಸ್ಪಷ್ಟ ಬಹುಮತ ಇದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ , ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.




