suddibindu.in
Vijayanagar :ವಿಜಯನಗರ : ಮೂಡಾ ವಿಚಾರದಲ್ಲಿ ಸಿಎಂ ಅವರ ತಪ್ಪು ಮಾಡಿಲ್ಲ. ಸುಖ ಸುಮ್ಮನೇ ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆಂದು ಉತ್ತರಕನ್ನಡ ಜಿಲ್ಲಾ ಉಸ್ರುವಾರಿ ಸಚಿವ ಮಂಕಾಳು ವೈದ್ಯ ಅವರು ಸಿಎಂ ಮೇಲಿನ ಆರೋಪವನ್ನ ತಳ್ಳಿಹಾಕಿದ್ದಾರೆ.
ವಿಜಯನಗರದಲ್ಲಿ ಈ ಕುರಿತು ಮಾತನಾಡಿದ ಸಚಿವರು ಮೂಡಾ ವಿಚಾರದಲ್ಲಿ ರಾಜ್ಯಪಾಲರ ನಡೆ ಖಂಡನೀಯವಾಗಿದೆ. ಅವರು ಕೇಂದ್ರದ ಬಿಜೆಪಿ ಏಜೆಂಟ್ ಅಂತೆ ವರ್ತಿಸುತ್ತಿದ್ದಾರೆಂದರು.
ಇದನ್ನೂ ಓದಿ
- ಹೈಟೆಕ್ ತಂತ್ರಕ್ಕೆ ಸಿಕ್ಕಿಬಿದ್ದ ಜೂಜುಕೋರರು; ಡ್ರೋಣ್ ಮೂಲಕ ಪತ್ತೆಯಾದ ಇಸ್ಪೀಟ್ ಅಡ್ಡೆ
- “ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಗಿಡ ವಿತರಿಸಿದ ಪ್ರಶಾಂತ ನಾಯ್ಕ”
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮರು ಅರ್ಜಿ ಕಡ್ಡಾಯ : ರಾಜ್ಯ ಸರ್ಕಾರದಿಂದ ಮರುಪರಿಶೀಲನೆಗೆ ಸಿದ್ಧತೆ
ಮುಖ್ಯಮಂತ್ರಿಯವರ ಬದಲಾವಣೆಯ ಸುಳಿವು ಸಿಕ್ಕಿದೆ ಎಂಬ ವಿಜಯೇಂದ್ರ ಹೇಳಿಕೆ ವಿವಾಚರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವರು ಬಿಜೆಪಿಯವರು ಸುಖಸುಮ್ಮನೆ ಸುಳ್ಳುಗಳನ್ನು ಹೇಳುತ್ತಿದ್ದಾರೆ, ಬಿಜೆಪಿಯವರು ಸುಳ್ಳು ಹೇಳುವಲ್ಲಿ ನಿಸೀಮರು.136 ಶಾಸಕರ ಬೆಂಬಲದಿಂದ ಸರ್ಕಾರ ರಚನೆಯಾಗಿದೆ, ಸ್ಪಷ್ಟ ಬಹುಮತ ಇದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ , ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.




