suddibindu.in
ಶಿರಸಿ: ಕೇಂದ್ರ ಮೋಟಾರು ವಾಹನಗಳ ನಿಯಮ’ಗಳ ಅಡಿಯಲ್ಲಿ ಅನುಮತಿ ನೀಡಿರುವ ದೀಪಗಳನ್ನು (ಹೆಡ್ಲೈಟ್) ಮಾತ್ರ ವಾಹನಗಳಿಗೆ ಅಳವಡಿಸಬೇಕು. ಎಲ್ಇಡಿ ನಿರ್ಬಂಧಿಸಿರುವ ಬಗ್ಗೆ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಬಿಡ್ಕಿ ಬೈಲ್ ನಲ್ಲಿ ಬೈಕ್ ಸವಾರನೋರ್ವನಿಗೆ 5 ಸಾವಿರ ದಂಡ ವಿಧಿಸಲಾಗಿದೆ.
ಇದನ್ನೂ ಓದಿ
- ಜ್ಯೋತಿಷಿ ಕಮಲಾಕರ್ ಭಟ್ ಸೇರಿ ಏಳು ಆರೋಪಿಗಳ ಮಧ್ಯಂತರ ಜಾಮೀನು ಅರ್ಜಿ ವಜಾ
- ಸಚಿವರ ಪಟ್ಟಿ ಆಯ್ಕೆಗೆ ತೆರೆ : ಉತ್ತರಕನ್ನಡಕ್ಕೆ ಮಂಕಾಳ್ ವೈದ್ಯ ಬಹುತೇಕ ಖಚಿತ
- ಕಾವೇರಿ ವಿಚಾರ : ಭಾನುವಾರ ಸರ್ವಪಕ್ಷ ಸಭೆ: ಸಿಎಂ ಡಿ ಕೆ ಶಿವಕುಮಾರ್
ವಾಹನಗಳಿಗೆ ಹೆಚ್ಚಿನ ಪ್ರಖರತೆವುಳ್ಳ ಎಲ್ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುವ ಪರಿಣಾಮವಾಗಿ ಎದುರು ಬರುವ ವಾಹನ ಸವಾರರಿಗೆ ಕಣ್ಣು ಕುಕ್ಕಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು ತಡೆಗಟ್ಟಲು ಸರಕಾರ ಮುಂದಾಗಿದೆ. ಶಿರಸಿ ನಗರದ ಬಿಡ್ಕಿ ಬೈಲ್ ನಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಮತ್ತು ಸಿಬ್ಬಂದಿಗಳಾದ ಎಎಸ್ಐ ಹೊನ್ನಪ್ಪ,ನೆಲ್ಸನ್ ಮಂಥಾರೊ,ಹನಮಂತ ಕಬಾಡಿಯವರನ್ನೊಳಗೊಂಡ ತಂಡ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಎಲ್ಇಡಿ ಲೈಟ್ ಗಳನ್ನ ಅಳವಡಿಸಿದ್ದ ವಾಹನ ಸವಾರರ ಮೇಲೆ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ 5000 ರೂ ದಂಡ ವಿಧಿಸಲಾಗಿದೆ




