suddibindu.in
ಯಲ್ಲಾಪುರ : ಮಾಡಬಾರದ್ದನ್ನೆಲ್ಲಾ ಮಾಡಿಕೊಂಡು ಕ್ಷೇತ್ರದ ಹಾಗೂ ಜಿಲ್ಲೆಯ ಮಾನವನ್ನು ಹರಾಜು ಹಾಕಿದ್ದಾರೆ ಎಂಬ ಮಾತಿನ ಅರ್ಥದ ಬಗ್ಗೆ ಕಾಗೇರಿ ಅವರೇ ತಾವೇ ಸ್ಪಷ್ಟಪಡಿಸಬೇಕು. ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡುವುದಕ್ಕೆ ಹೋರಟಿರುವ ಸನ್ಮಾನ್ಯ ಕಾಗೇರಿ ಅವರಿಂದ ಜಿಲ್ಲೆಯ ಯಾವ ಮಾನ ಗೌರವ ಹೆಚ್ಚಾಗಿದೆ ಅಥವ ನನ್ನಿಂದ ಯಾವ ಕಾರಣಕ್ಕೆ ಜಿಲ್ಲೆಯ ಗೌರವಕ್ಕೆ ಧಕ್ಕೆಯಾಗಿದೆ ಎಂಬುವುದನ್ನು ಕಾಗೇರಿ ಅವರು ಉತ್ತರ ಕನ್ನಡ ಜಿಲ್ಲೆಯ ಜನತೆಯ ಮುಂದೆ ಸ್ಪಷ್ಟಪಡಿಸಬೇಕೆಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿರಾಮ ಹೆಬ್ಬಾರ್

ಲೋಕಸಭಾ ಚುನಾವಣೆ ಅಭ್ಯರ್ಥಿ ಕಾಗೇರಿ ಅವರು ಉದ್ದೇಶಪೂರ್ವಕವಾಗಿ ಜಿಲ್ಲೆಯಲ್ಲಿ ನಡೆಯುವ ಪಕ್ಷದ ಸಭೆ, ಸಮಾರಂಭ ಹಾಗೂ ಪತ್ರಿಕೆಗಳಲ್ಲಿನ ಜಾಹಿರಾತಿನಲ್ಲಿ ನನ್ನ ಭಾವಚಿತ್ರವನ್ನು ತೆಗೆದು ಹಾಕಿರುವ ತಮಗೆ ಈ ರೀತಿಯಲ್ಲಿ ಮಾತನಾಡುವ ಯಾವ ಅಧಿಕಾರವಿದೆ. ಚುನಾವಣೆ ಸಂದರ್ಭದಲ್ಲಿ ನನ್ನ ಹಾಗೂ ನಿಮ್ಮ ಸಮಸ್ಯೆ ಒಂದೇ ಆಗಿತ್ತು ಆದರು ಸಹ ನಾನು ಸಹಿಸಿಕೊಂಡು ಬಂದಿದ್ದೇನೆ.

ಇದನ್ನೂ ಓದಿ

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸುವುದಕ್ಕೆ ಸತತ ಒಂದು ತಿಂಗಳುಗಳ ಕಾಲ ಅವಿರತವಾಗಿ ಅಪಪ್ರಚಾರ ನಡೆಸಿ ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪಕ್ಷ ವಿರೋಧಿ ನಡೆಸಿದ ಕೆಲವು ಪ್ರಮುಖರಲ್ಲಿ ಒಬ್ಬರಾದ ನರಸಿಂಹ ಕೋಣೆಮನೆ ಅವರ ಸಹೋದರ ಹರಿಪ್ರಕಾಶ ಕೋಣೆಮನೆಗೆ ಪಕ್ಷವಿರೋಧಿ ಚಟುವಟಿಕೆ ಕೈಗೊಂಡರು ಸಹ ರಾಜ್ಯ ವಕ್ತಾರ ಜವಾಬ್ದಾರಿಯನ್ನು ನೀಡುವಾಗ ಕಾಗೇರಿ ಅವರಿಗೆ ವಿಷಯ ತಿಳಿಯದೆ ಹೋಗಿತ್ತೆ ಪಕ್ಷಕ್ಕೆ ದ್ರೋಹ ಮಾಡಿರುವವರಿಗೆ ಜವಾಬ್ದಾರಿ ಬಹುಮಾನ ನೀಡಿರುವುದರ ಹಿಂದಿನ ಉದ್ದೇಶವೇನು.

ಸಹೋದರಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ಸೋಲಿಗೆ ಹೆಬ್ಬಾರ್ ಕಾರಣ ಎಂದು ಹೇಳಿದ್ದಾರೆ. ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಶಕ್ತಿ ಅಭ್ಯರ್ಥಿಯ ಸೋಲಿಸುವ ಮಟ್ಟಿಗೆ ಇದೆ ಎಂದರೆ ಸಹೋದರಿ ರೂಪಾಲಿ ನಾಯ್ಕ ಅವರು ಮುಂದಿನ ಚುನಾವಣೆಯಲ್ಲಿಯು ಸಹ ಗೆಲುವು ಸಾಧಿಸುವುದಕ್ಕೆ ಕಷ್ಟವಾಗಲಿದೆ ಎಂದು ತಿಳಿದುಕೊಳ್ಳಬೇಕು.

ದ್ವೇಷವನ್ನು ಹರಡುವ ಮಾತುಗಳೇ ಬಂಡವಾಳವನ್ನಾಗಿರಿಸಿಕೊಂಡಿರುವ ಸ್ನೇಹಿತ ಬಸವನಗೌಡ ಪಾಟೀಲ್ ಯತ್ನಾಳ ಅವರೇ ನನ್ನಿಂದ ಪಕ್ಷಕ್ಕೆ ಎಷ್ಟು ಹಾಕಿ ಉಂಟಾಗಿದೆಯೋ ಅದರ ನೂರು ಪಟ್ಟು ಹಾನಿ ಕಳೆದ 1 ವರ್ಷಗಳಿಂದ ತಮ್ಮ ಮಾತುಗಳಿಂದ ಪಕ್ಷಕ್ಕೆ ಉಂಟಾಗಿದೆ. ಆದರೂ ಸಹ ನಮ್ಮ ಜಿಲ್ಲೆಯ ರಾಜಕೀಯದ ಚಿತ್ರಣದ ಬಗ್ಗೆ ಗೊತ್ತಿರದ ತಾವು ತಿಳಿಯದ್ದೆ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲಾ.

ಕಳೆದ 6 ಲೋಕಸಭಾ ಚುನಾವಣೆಯ ಕಾಲಘಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪಕ್ಷದಲ್ಲೇ ಉಳ್ಳಿದುಕೊಂಡು ಯಾರು ಯಾರು ಎನ್ನೂ ಮಾಡಿದ್ದಾರೆ ಎಂಬ ಇತಿಹಾಸ ಗೊತ್ತಿಲ್ಲದೆ ಹೋದಂತಹ ವ್ಯಕ್ತಿ ನಾನಲ್ಲ. ಕೆಲವರು ಆಡದೇ ಮಾಡುತ್ತಾರೆ ಕೆಲವರು ಆಡಿ ಮಾಡುತ್ತಾರೆ ಆಡದೇ ಮಾಡುವವರು ಬುದ್ಧಿವಂತರಾಗುತ್ತಾರೆ ಆಡಿ ಮಾಡುವವರನ್ನು ಬುದ್ಧಿವಂತರು ಎಂದು ಅನಿಸಿಕೊಳ್ಳುವುದಿಲ್ಲ ಇದನ್ನು ಸಹ ಮಾನ್ಯ ಕಾಗೇರಿ ಅವರು ಅರಿತುಕೊಂಡರೇ ಒಳ್ಳೆಯದು.

ಹೆಬ್ಬಾರ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂದಾನ ನಾನೇ ಅವರನ್ನು ಮಂತ್ರಿ ಮಾಡಿದ್ದು ಎಂದು ಕಾಗೇರಿ ಅವರು ಹೇಳಿದ್ದಾರೆ. ಸತ್ಯ ನಮ್ಮ 17 ಶಾಸಕರ ರಾಜಿನಾಮೆಯ ಫಲವೇ ಸನ್ಮಾನ್ಯ ಬಿ.ಎಸ್‌.ಯಡಿಯೂರಪ್ಪ ಅವರು 4 ನೇ ಬಾರಿ ಮುಖ್ಯಮಂತ್ರಿಗಳಾಗಿದ್ದು ಕಾಗೇರಿ ಅವರು ಸ್ಪೀಕರ್‌ ರಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗಿದ್ದು ನಮ್ಮ ತ್ಯಾಗದ ಫಲವೇ ತಾವೇಲ್ಲರೂ ಸಹ ಅಧಿಕಾರವನ್ನು ಅನುಭವಿಸಿದ್ದೀರಿ ಎಂದು ಕಾಗೇರಿ ಅವರು ಅರಿತುಕೊಳ್ಳಬೇಕು.ಕಾಗೇರಿ ಅವರು ಈ ರೀತಿಯಲ್ಲಿ ಹೇಳಿಕೆಯನ್ನು ನೀಡಿದರೆ ನಾನು ಸಹ ತಕ್ಕ ಉತ್ತರ ನೀಡುತ್ತೇನೆ ಎಂದು ನೆನಪಿರಲಿ.

.