ಸುದ್ದಿಬಿಂದು ಬ್ಯೂರೋ
ಕಾರವಾರ: ಉತ್ತರಕನ್ನಡ ಜಿಲ್ಲೆಯ ನಗರದ ಮಯೂರ ವರ್ಮ ವೇದಿಕೆಯಲ್ಲಿ ಡಿ. 2ನಾಳೆ ಗಡಿಭಾಗದ ಕನ್ನಡ ರಾಜ್ಯೋತ್ಸವ ಸಂಭ್ರಮ ಆಯೋಜಿಸಲಾಗಿದ್ದು, ಕನ್ನಡ ಸಂಗೀತ ಕಾರ್ಯಕ್ರಮ ನಡೆಯಲಿದೆ.ಕರ್ನಾಟಕ ರಕ್ಷಣಾ ವೇದಿಕೆ ‌ನೇತೃತ್ವದಲ್ಲಿ‌ ಈ ಕಾರ್ಯಕ್ರಮ ನಡೆಯಲಿದೆ.

ರಾಜ್ಯದ ಗಡಿಭಾಗದಲ್ಲೂ ಕನ್ನಡವನ್ನು ಕಟ್ಟುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ‌ ಮಾಡಲಾಗಿದೆ. ಕರವೇ ವತಿಯಿಂದ ಗಡಿಭಾಗದ ಕನ್ನಡ ರಾಜ್ಯೋತ್ಸವ ಆಚರಿಸಿ, ಕನ್ನಡ ಸಂಗೀತ ಕಾರ್ಯಕ್ರಮವನ್ನ ಆಚರಿಸಲಾಗುವುದು.

ಕಾರ್ಯಕ್ರಮದಲ್ಲಿ 1ಗಂಟೆ ವೇದಿಕೆಯನ್ನು ಸ್ಥಳೀಯ ಕಲೆಗಳಿಗೆ ಕಲ್ಪಿಸಲಾಗುವುದು. ಈ ಸಂದರ್ಭದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸುವ ಕಾರ್ಯಕ್ರಮ ಸಹ ಕೈಗೊಳ್ಳಲಾಗಿದೆ ಎಂದರು. ನಾಳೆ ಡಿ. 2ರಂದು ನಡೆಯಲಿರುವ ಕನ್ನಡ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.

ಅದರಲ್ಲಿ ಕನ್ನಡ ಕೋಗಿಲೆಯ ವಿಜೇತ ಕಾಶು ಅಲಿ, ಸರಿಗಮಪ ಖ್ಯಾತಿಯ ಸುರಕ್ಷಾದಾಸ, ಕನ್ನಡ ಕೋಗಿಲೆ ಖ್ಯಾತಿಯ ಹಾಗೂ ಪುರುಷ ಮತ್ತು ಸ್ತ್ರೀಯರ ಕಂಠದಲ್ಲೂ ಹಾಡುವ ಮಂಜು, ಸಿಂಚನಾ ಮೈಸೂರ, ಮಿಮಿಕ್ರಿ ಕಲಾವಿದರು ಪಾಲ್ಗೊಳ್ಳಲಿದ್ದಾರೆಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ತಿಳಿಸಿದ್ದಾರೆ.