ಹುಬ್ಬಳ್ಳಿ: ದಸರಾ ಹಾಗೂ ಅಕ್ಟೋಬರ್ ರಜೆಯನ್ನ ಅಕ್ಟೋಬರ್ 30ರ ವರೆಗೆ ವಿಸ್ತರಣೆ ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ಕೋರಿದ್ದಾರೆ.

ಅಕ್ಟೋಬರ್ 30ರ ಒಳಗೆ ಶಾಲೆಗಳನ್ನ ಆರಂಭಿಸಿದ್ದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ವಿವರಿಸಿದ್ದರು‌. ಶಿಕ್ಷಣ ವ್ಯವಸ್ಥೆ ಇವತ್ತು ಸರಿಯಾದ ವ್ಯವಸ್ಥೆಯಲ್ಲಿ ಇಲ್ಲ. ಮೊದಲು ರಜಾ ದಿನಗಳು ಫಿಕ್ಸ್ ಆಗಿ ಇರ್ತಾ ಇದ್ವು. ಜ್ಞಾನ ಇಲ್ಲದ ಅಧಿಕಾರಿಗಳು ತಮಗೆ ಹೇಗೆ ಬೇಕೋ ಹಾಗೆ ರಜಾ ದಿನಗಳ ನಿಗದಿ ಮಾಡಿದ್ದಾರೆ, ಇದು ಸರಿಯಾದದ್ದಲ್ಲ ಎಂದರು.

ನಾನು ಈ ಸಲುವಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೆನೆ. ಈ ಹಿಂದೆ ಇದ್ದಂತಹ ಪದ್ದತಿಯನ್ನ ಮುಂದುವರೆಸಿಕೊಂಡು ಹೋಗಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದರು ಹೊರಟ್ಟಿಯವರು ಶಿಕ್ಷಣ ಸಚಿವರ ಜೊತೆ ಮಾತನಾಡಿರುವ ಸಂಪೂರ್ಣ ವಿಡಿಯೋ ಇಲ್ಲಿದೆ..